Asianet Suvarna News Asianet Suvarna News

ಇಂದಿರಾ ಗಾಂಧಿ ಕೊಂದಂತೆ ಒಂದು ದಿನ ನನ್ನನ್ನೂ ಕೊಲ್ಲುತ್ತಾರೆ: ಕೇಜ್ರಿ!

ತಮ್ಮ ಭದ್ರತಾ ಸಿಬ್ಬಂದಿಯಿಂದಲೇ ಹತ್ಯೆ ಸಾಧ್ಯತೆ ಎಂದ ದೆಹಲಿ ಸಿಎಂ| ‘ಇಂದಿರಾ ಗಾಂಧಿ ಕೊಂದ ರೀತಿಯಲ್ಲೇ ನನ್ನನ್ನೂ ಕೊಲ್ಲುತ್ತಾರೆ’| ‘ತಮ್ಮ ಭದ್ರತಾ ಸಿಬ್ಬಂದಿಯಿಂದ ಬಿಜೆಪಿಗೆ ವರದಿ ಸಲ್ಲಿಕೆ’| ತಮ್ಮ ಹತ್ಯೆಗೆ ಬಿಜೆಪಿ ಸಂಚು ರೂಪಿಸುತ್ತಿದೆ ಎಂದ ಅರವಿಂದ್ ಕೇಜ್ರಿವಾಲ್|

Arvind Kejriwal Claims He Will Be Assassinated Like Indira Gandhi
Author
Bengaluru, First Published May 18, 2019, 3:42 PM IST

ನವದೆಹಲಿ(ಮೇ.18):‘ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿ ಹತ್ಯೆಗೈದ ರೀತಿಯಲ್ಲೇ ನನ್ನನ್ನೂ ಒಂದು ದಿನ ಕೊಲ್ಲಲಾಗುತ್ತದೆ..’ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಬಿಜೆಪಿ ತಮ್ಮನ್ನು ಕೊಲ್ಲಲು ಬಯಸಿದ್ದು, ಭದ್ರತಾ ಸಿಬ್ಬಂದಿಯಿಂದಲೇ ತಮ್ಮ ಹತ್ಯೆಯಾಗುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. 

ತಮ್ಮ ಭದ್ರತೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಬಿಜೆಪಿಗೆ ವರದಿ ಸಲ್ಲಿಸುತ್ತಿದ್ದು, ಅವರಿಂದಲೇ ತಮ್ಮ ಹತ್ಯೆಯ ಸಂಚು ರೂಪಿಸುವ ಸಾಧ್ಯತೆ ಇದೆ ಎಂದು ಕೇಜ್ರಿವಾಲ್ ಆಶ್ಚರ್ಯಕರ ಹೇಳಿಕೆ ನೀಡಿದ್ದಾರೆ.

ಇತ್ತೀಚಿಗೆ ದೆಹಲಿಯ ಮೋತಿನಗರದಲ್ಲಿ ಹಮ್ಮಿಕೊಂಡಿದ್ದ ರೋಡ್ ಶೋ ವೇಳೆ ಕೇಜ್ರಿವಾಲ್ ಗೆ ಯುವಕನೋರ್ವ ಕಪಾಳಮೋಕ್ಷ ಮಾಡಿದ್ದು, ಇದಕ್ಕೆ ಬಿಜೆಪಿಯೇ ಕಾರಣ ಎಂದು ದೆಹಲಿ ಸಿಎಂ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.

Follow Us:
Download App:
  • android
  • ios