ಗೋದಾಮಿನಲ್ಲಿದ್ದ ಸಿನಿಮಾ, ಧಾರಾವಾಹಿ ಶೂಟಿಂಗ್​ ಸೆಟ್​​ ಮುಂತಾದವುಗಳು ಕೂಡಾ ಬೆಂಕಿಗಾಹುತಿಯಾಗಿವೆ.

ಬೆಂಗಳೂರು (ಫೆ.17): ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಕಲಾವಿದ ಅರುಣ್ ಸಾಗರ್​ ಅವರಿಗೆ ಸೇರಿರುವ ಗೋದಾಮಿನಲ್ಲಿ ಅಗ್ನಿ ಅಕಸ್ಮಿಕ ನಡೆದಿದೆ.

ಕಳೆದ ಫೆ.15ರಂದು ಬೆಂಕಿ ಅನಾಹುತ ನಡೆದಿದ್ದು ಸುಮಾರು 75 ಲಕ್ಷ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಹೇಳಲಾಗಿದೆ.

ಗೋದಾಮಿನಲ್ಲಿದ್ದ ಸಿನಿಮಾ, ಧಾರಾವಾಹಿ ಶೂಟಿಂಗ್​ ಸೆಟ್​​ ಮುಂತಾದವುಗಳು ಕೂಡಾ ಬೆಂಕಿಗಾಹುತಿಯಾಗಿವೆ.