ಬೆಂಗಳೂರಿನಲ್ಲಿ ‌ಸಾಕಷ್ಟು‌ ಕೆರೆಗಳಿದ್ದವು‌ ಆದ್ರೆ‌ ಅವುಗಳಲ್ಲಿ‌ ಕೆಲವು ಕೆರೆಗಳು‌‌ ಮಾತ್ರ ಉಳಿದಿವೆ. ನೂರಾರು ಕೆರೆಗಳನ್ನ ಒಟ್ಟುಗೂಡಿಸಿ ಒಂದು ದೊಡ್ಡ ಕೆರೆ ಮಾಡಲು ಆರ್ಟ್​ ಆಫ್ ಲಿವಿಂಗ್​ ಆಶ್ರಮ ಮುಂದಾಗಿದೆ.

ಬೆಂಗಳೂರು(ಮಾ.06): ಬೆಂಗಳೂರಿನಲ್ಲಿ ‌ಸಾಕಷ್ಟು‌ ಕೆರೆಗಳಿದ್ದವು‌ ಆದ್ರೆ‌ ಅವುಗಳಲ್ಲಿ‌ ಕೆಲವು ಕೆರೆಗಳು‌‌ ಮಾತ್ರ ಉಳಿದಿವೆ. ನೂರಾರು ಕೆರೆಗಳನ್ನ ಒಟ್ಟುಗೂಡಿಸಿ ಒಂದು ದೊಡ್ಡ ಕೆರೆ ಮಾಡಲು ಆರ್ಟ್​ ಆಫ್ ಲಿವಿಂಗ್​ ಆಶ್ರಮ ಮುಂದಾಗಿದೆ.

ಕೈವಾರ ಬಳಿ ಇರುವ ಕೆರೆಗಳನ್ನು ಪುನಶ್ಚೇತನಗೊಳಿಸುವ ಕಾರ್ಯವನ್ನು ಆರ್ಟ್​ ಆಫ್ ಲಿವಿಂಗ್​ ಆಶ್ರಮ ಕೈಗೆತ್ತುಕೊಂಡಿದೆ.. ಇದರಿಂದಾಗಿ ಕೈವಾರ ಸುತ್ತಮುತ್ತಲಿನ ಪ್ರದೇಶಗಳಿಗೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕಾರ್ಯ ನಡೆದಿದೆ.

ಇದರಿಂದಾಗಿ ರೈತರಿಗೆ ತುಂಬಾನೆ ಅನುಕೂಲವಾಗಿದೆ. ಈ ನೀರು ಬರಿ ಕೃಷಿ ಕಾರ್ಯಕಲ್ಲದೆ, ದನ-ಕರುಗಳಿಗೆ ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಹೀಗಾಗಿ ಬರ ಪರಿಸ್ಥತಿಯಲ್ಲಿ ಕೊಂಚ ಮಟ್ಟಿಗಾದರೂ ನೀರಿನ ಸಮಸ್ಯೆ ನಿವಾರಣೆಯಾಗಿದೆ ಅಂತಾರೆ ಕೈವಾರದ ರೈತರು.

ಒಟ್ಟಾರೆ ಬರ ಪರಿಸ್ಥಿತಿಯಲ್ಲೂ ಕೆರೆಗಳನ್ನು ಉಳಿಸುವ ಕಾರ್ಯ ನಿರ್ವಾಹಿಸುತ್ತಿರುವ ಆರ್ಟ್​ ಆಫ್ ಲಿವಿಂಗ್​ ಆಶ್ರಮದ ಸಿಬ್ಬಂದಿ ಕೆಲಸ ನಿಜಕ್ಕೂ ಶ್ಲಾಘನೀಯ.