ಗೌರಿ ಹತ್ಯೆ ಮಾಡಲು ಹಂತಕರಿಗೆ ಬಿಜಾಪುರದಿಂದ ಗನ್ ರವಾನೆಯಾಗಿದೆ ಎಂಬ ಸ್ಪಷ್ಟ ಮಾಹಿತಿಯನ್ನ ಎಸ್ಐ'ಟಿ ಅಧಿಕಾರಿಗಳ ಮುಂದೆ ಬಯಲು ಮಾಡಿದ್ದಾನೆ.
ಬೆಂಗಳೂರು(ಸೆ.17): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳ ತನಿಖೆ ತೀವ್ರಗೊಂಡಿದ್ದೆ.
ಗೌರಿ ಲಂಕೆಶ್ ಹತ್ಯೆಯಲ್ಲಿ ಸ್ಥಳೀಯ ರೌಡಿಗಳ ಕೈವಾಡವಿರಬಹುದು ಎಂಬ ಶಂಕೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹಾಲಿ ರೌಡಿ ತನ್ವೀರ್'ನನ್ನ ವಿಚಾರಣೆಗೊಳಪಡಿಸಿದೆ. ವಿಚಾರಣೆ ವೇಳೆ ಗೌರಿ ಹತ್ಯೆಗೆ ಹಂತಕ ಬಳಸಿದ್ದು ಗನ್ ಎಲ್ಲಿಂದ ಸರಬರಾಜು ಆಗಿದೆ ಅನ್ನೋದನ್ನ ತನಿಖಾಧಿಕಾರಿಗಳ ಮುಂದೆ ರೌಡಿ ತನ್ವೀರ್ ಬಯಲು ಮಾಡಿದ್ದಾನೆ.
ಗೌರಿ ಹತ್ಯೆ ಮಾಡಲು ಹಂತಕರಿಗೆ ಬಿಜಾಪುರದಿಂದ ಗನ್ ರವಾನೆಯಾಗಿದೆ ಎಂಬ ಸ್ಪಷ್ಟ ಮಾಹಿತಿಯನ್ನ ಎಸ್ಐ'ಟಿ ಅಧಿಕಾರಿಗಳ ಮುಂದೆ ಬಯಲು ಮಾಡಿದ್ದಾನೆ. ತನ್ವೀರ್'ನಿಂದ ಮಾಹಿತಿ ಕಲೆ ಹಾಕಿದ್ದ ಎಸ್'ಐಟಿ ಅಧಿಕಾರಿಗಳು ಹಂತಕರ ಸುಳಿವನ್ನ ಹುಡುಕಿ ಬಿಜಾಪುರಕ್ಕೆ ತೆರಳಿದ್ದಾರೆ.
