ಬಗೆದಷ್ಟು ಬಯಲಾಗುತ್ತಿದೆ ಹ್ಯಾರಿಸ್ ಪುತ್ರನ ಕರ್ಮಕಾಂಡ : ನಲಪಾಡ್ ವಿರುದ್ಧ ಮತ್ತೊಂದು ಪ್ರಕರಣ
ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಇದೀಗ ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರು : ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಇದೀಗ ಹ್ಯಾರಿಸ್ ಪುತ್ರ ನಲಪಾಡ್ ವಿರುದ್ಧದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಎಂಜಿ ರಸ್ತೆಯ ಹೋಟೆಲ್ ಮುಂದೆ ಮೊಹಮ್ಮದ್ ನಲಪಾಡ್ ಮಹಿಳೆಯೋರ್ವರಿಗೆ ಜೀವ ಬೆದರಿಕೆ ಒಡ್ಡಿದ್ದನೆನ್ನಲಾಗಿದೆ.
ಈ ಬಗ್ಗೆ ನೊಂದ ಮಹಿಳೆ ಫೇಸ್’ಬುಕ್’ನಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಲ್ಲದೇ ಆತನ ವಿರುದ್ಧ ಮಹಿಳೆ ದೂರನ್ನು ನೀಡಿದ್ದರೂ ಕೂಡ ಪೊಲೀಸರು ದೂರನ್ನು ಹರಿದುಹಾಕಿದ್ದರು ಎಂದು ಆಕೆ ದೂರಿದ್ದಾರೆ.