ಜಮೀರ್ ಜತೆ ಸೆಣಸಲು ಅಲ್ತಾಫ್ ಜೆಡಿಎಸ್ಗೆ
ಕಾಂಗ್ರೆಸ್ ತೊರೆದು ಸೋಮವಾರ ಜೆಡಿಎಸ್ಗೆ ಸೇರ್ಪಡೆಯಾದ ಅಲ್ತಾಫ್ ಖಾನ್ ಅವರಿಗೆ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬಾವುಟ ನೀಡುವ ಮೂಲಕ ಬರಮಾಡಿಕೊಂಡರು.
ಬೆಂಗಳೂರು : ಕಾಂಗ್ರೆಸ್ ತೊರೆದು ಸೋಮವಾರ ಜೆಡಿಎಸ್ಗೆ ಸೇರ್ಪಡೆಯಾದ ಅಲ್ತಾಫ್ ಖಾನ್ ಅವರಿಗೆ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರು ಬಾವುಟ ನೀಡುವ ಮೂಲಕ ಬರಮಾಡಿಕೊಂಡರು.
ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ, ಶಾಸಕ ಗೋಪಾಲಯ್ಯ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ ಉಪಸ್ಥಿತರಿದ್ದರು. ಜೆಡಿಎಸ್ ವಿರುದ್ಧ ಬಂಡೆದ್ದು ಕಾಂಗ್ರೆಸ್ ಸೇರಿರುವ ಜಮೀರ್ ಅಹಮದ್ ಖಾನ್ ವಿರುದ್ಧ ಅಲ್ತಾಫ್ ಖಾನ್ ಅವರು ಕಣಕ್ಕಿಳಿಯಲಿದ್ದಾರೆ.