ನಾಡಗೀತೆಗೆ ಸಿಎಂ ಅಗೌರವ: ಆರೋಪ
ಸರ್ಕಾರಿ ಸಮಾರಂಭದಲ್ಲಿ ನಾಡಗೀತೆ ಹಾಡುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಕೆ, ಎಲೆ ಹಾಕಿಕೊಂಡು ಮೆಲ್ಲುತ್ತಾ, ನಾಡಗೀತೆಗೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ,
ದಾವಣಗೆರೆ: ಸರ್ಕಾರಿ ಸಮಾರಂಭದಲ್ಲಿ ನಾಡಗೀತೆ ಹಾಡುವಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಕೆ, ಎಲೆ ಹಾಕಿಕೊಂಡು ಮೆಲ್ಲುತ್ತಾ, ನಾಡಗೀತೆಗೆ ಅಗೌರವ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ,
ಹೈಸ್ಕೂಲ್ ಮೈದಾನದಲ್ಲಿ ನಿಗದಿತ ಸಮಯಕ್ಕಿಂತಲೂ ತಡವಾಗಿಯೇ ಆರಂಭಗೊಂಡ ವೇದಿಕೆಯನ್ನೇರಿದ ಸಿಎಂ ಸಿದ್ದರಾಮಯ್ಯ ಸಮಾರಂಭದ ಆರಂಭದಲ್ಲಿ ನಾಡಗೀತೆ ಹಾಡಲಾರಂಭಿಸಿದಾಗ ಎಲ್ಲರೂ ಎದ್ದು ನಿಂತರು. ಗೀತೆ ಕೇಳಿ ಬರುತ್ತಿದ್ದಾಗಲೇ ತಮ್ಮ ಪಂಚೆ ಸರಿ ಮಾಡಿಕೊಳ್ಳುತ್ತಾ, ದೇಹವನ್ನು ಅತ್ತಿಂದಿತ್ತ ಹೊರಳಿಸುತ್ತಿದ್ದರು. ಸಿಎಂ ಅವರ ಈ ವರ್ತನೆ ಸಾರ್ವಜನಿಕರ ವಲಯದಿಂದ ಬೇಸರದ ಮಾತುಗಳು ಕೇಳಿಬಂದಿವೆ.
ಇದೇವೇಳೆ ನಾಗಮಂಗಲದಲ್ಲಿ ಹರದನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕೃಷಿ ಸಚಿವ ಕೃಷ್ಣ ಭೈರೇಗೌಡ ಮತ್ತು ಶಾಸಕ ಎನ್.ಚಲುವರಾಯಸ್ವಾಮಿ ನಾಡಗೀತೆಗೆ ಅವಮಾನ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.