ಅಖನೂರು ಭಯೋತ್ಪಾದಕ ದಾಳಿ; ಮಡಿದ ಸೈನಿಕರ ಕುಟುಂಬಕ್ಕೆ ತಲಾ 1 ಲಕ್ಷ ರೂ ಪರಿಹಾರ ಘೋಷಣೆ
ಜಮ್ಮು ಕಾಶ್ಮೀರದ ಅಖನೂರು ಪ್ರದೇಶದಲ್ಲಿರುವ ಜಿಆರ್ ಇಎಫ್ ಕ್ಯಾಂಪ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ ಮೂವರು ಸೈನಿಕರ ಕುಟುಂಬಕ್ಕೆ ತಲಾ 1 ಲಕ್ಷ ರೂಗಳನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಘೋಷಿಸಿದ್ದಾರೆ.
ನವದೆಹಲಿ (ಜ.10): ಜಮ್ಮು ಕಾಶ್ಮೀರದ ಅಖನೂರು ಪ್ರದೇಶದಲ್ಲಿರುವ ಜಿಆರ್ ಇಎಫ್ ಕ್ಯಾಂಪ್ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಮಡಿದ ಮೂವರು ಸೈನಿಕರ ಕುಟುಂಬಕ್ಕೆ ತಲಾ 1 ಲಕ್ಷ ರೂಗಳನ್ನು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಘೋಷಿಸಿದ್ದಾರೆ.
ಅದೇ ರೀತಿ ದಾಳಿಯಲ್ಲಿ ಗಾಯಗೊಂಡವರಿಗೆ 25 ಸಾವಿರ ರೂಗಳನ್ನು ನೀಡುವುದಾಗಿ ಘೋಷಿಸಿದ್ದಾರೆ.
ನಿನ್ನೆ ರಾತ್ರಿ 1.15 ರ ಸುಮಾರಿಗೆ ಅಖನೂರ್ ಪ್ರದೇಶದ ಜಿಆರ್ ಇ ಎಫ್ ಕ್ಯಾಂಪ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಆ ಸಂದರ್ಭದಲ್ಲಿ 10 ಮಂದಿ ಯೋಧರು ಆ ಕ್ಯಾಂಪ್ ನಲ್ಲಿದ್ದರು ಎನ್ನಲಾಗಿದೆ. ಸೇನೆ ಕಾರ್ಯಾಚರಣೆ ಮುಂದುವರೆಸಿದೆ. ಆ ಪ್ರದೇಶದಲ್ಲಿ ಹೈ ಅಲರ್ಟ್ ಜಾರಿಗೊಳಿಸಲಾಗಿದೆ.