ಈ ಯಾತ್ರೆಗೂ ಮುನ್ನವೇ ಎಸ್ಪಿ ಕಾರ್ಯಕರ್ತರ ರೆಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪಕ್ಷದ ಮುಖಂಡರಾದ ಶಿವಪಾಲ್ ಯಾದವ್, ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲೇ ಈ ಗಲಾಟೆ ನಡೆದಿದೆ.
ಲಕ್ನೋ(ನ.03): ಉತ್ತರ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ರದ ಯಾದವ ಯುದ್ಧ ಮತ್ತೆ ಮುಂದುವರೆದಿದೆ. ಸಿಎಂ ಅಖಿಲೇಶ್ ಯಾದವ್ ವಿಕಾಸ ಯಾತ್ರೆ ಹಮ್ಮಿಕೊಂಡಿದ್ದಾರೆ.
ಆದರೆ, ಈ ಯಾತ್ರೆಗೂ ಮುನ್ನವೇ ಎಸ್ಪಿ ಕಾರ್ಯಕರ್ತರ ರೆಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಪಕ್ಷದ ಮುಖಂಡರಾದ ಶಿವಪಾಲ್ ಯಾದವ್, ಅಖಿಲೇಶ್ ಯಾದವ್ ಹಾಗೂ ಮುಲಾಯಂ ಸಿಂಗ್ ಯಾದವ್ ಸೇರಿದಂತೆ ಹಿರಿಯ ನಾಯಕರ ಸಮ್ಮುಖದಲ್ಲೇ ಈ ಗಲಾಟೆ ನಡೆದಿದೆ.
ಯಾದವ ಕಲಹ ಇನ್ನೂ ಇದೆ ಅನ್ನೋದನ್ನು ಈ ಘರ್ಷಣೆ ತೋರಿಸಿದೆ. ಅಲ್ಲದೆ ಘರ್ಷಣೆ ಮಧ್ಯೆಯೂ ಸಮಾವೇಶ ಮುಂದುವರಿತು. ವಿಶೇಷ ಅಂದ್ರೆ ವಿಕಾಸ ಯಾತ್ರೆಯ ಱಲಿಯಲ್ಲಿ ಸಿಎಂ ಅಖಿಲೇಶ್ ಯಾದವ್, ಎಸ್ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹಾಗೂ ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
