ಪದ್ಮನಾಭ ದೇವಾಲಯದ ಪೈನ್​ಕುನಿ ಮತ್ತು ಅಲ್ಪಾಸ್ಸಿ ಉತ್ಸವ 10ನೇ ದಿನವಾದ ಇಂದು ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು, ಹಾಹಾಗಿ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.

ಕೇರಳ ರಾಜಧಾನಿ ತಿರುವನಂತಪುರಂನಲ್ಲಿ ಇವತ್ತು ಪದ್ಮನಾಭ ಸ್ವಾಮಿ ದೇವಸ್ಥಾನದ ದೇವರ ವಿಗ್ರಹಗಳ ‘ಸ್ನಾನ’ ಮಾಡಿಸುವ ಮೆರವಣಿಗೆ ರನ್​ವೇ ಮೂಲಕವೇ ಸಾಗುವ ಕಾರಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಚಟುವಟಿಕೆಗಳನ್ನು 5 ತಾಸುಗಳ ಕಾಲ ಬಂದ್​ ಮಾಡಲು ಪ್ಲಾನ್​ ಮಾಡಲಾಗಿದೆ. ಪದ್ಮನಾಭ ದೇವಾಲಯದ ಪೈನ್​ಕುನಿ ಮತ್ತು ಅಲ್ಪಾಸ್ಸಿ ಉತ್ಸವ 10ನೇ ದಿನವಾದ ಇಂದು ದೇವರ ಮೂರ್ತಿಗಳ ಮೆರವಣಿಗೆ ನಡೆಯಲಿದ್ದು, ಹಾಹಾಗಿ ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ.

ಸಮುದ್ರ ತೀರದಲ್ಲಿ ಧಾರ್ಮಿಕ ಸ್ನಾನಕ್ಕಾಗಿ ತೆರಳುವ ದೇವರಮೂರ್ತಿ ರನ್​ವೇ ಹಾದು ಹೋಗುವವರೆಗೂ ಎರಡು ಪಕ್ಕದಲ್ಲಿ ಭಾರೀ ಬಿಗಿಭದ್ರತೆ ನಿಯೋಜನೆ ಮಾಡಲಾಗಿದೆ. ಶತಮಾನಗಳಿಂದ ಇದೇ ಹಾದಿಯಲ್ಲಿ ಮೆರವಣಿಗೆ ಸಾಗುತ್ತಿರುವ ಹಿನ್ನೆಲೆಯಲ್ಲಿ ಏರ್​​ಫೋರ್ಟ್​​ ನಿರ್ಮಾಣದ ಬಳಿಕವೂ ಅದೇ ಮಾರ್ಗದಲ್ಲಿ ಬರುವ ರನ್​ವೇ ಮೂಲಕ ಸಾಗುವ ಸಂಪ್ರದಾಯ ಮುಂದುವರೆಸಿಕೊಂಡು ಬರಲಾಗಿದೆ.