ಏರ್ ಏಷ್ಯಾ ವಿಮಾನದಲ್ಲಿ ಅವಾಂತರ
ಪ್ರಯಾಣಿಕರನ್ನು ಹೊರದಬ್ಬುವ ಸಲುವಾಗಿ ವಿಮಾನದೊಳಗೆ ಎಸಿ ಹೆಚ್ಚಿಸಿ ಹಿಮಾಲಯದಂಥ ವಾತಾವರಣ ನಿರ್ಮಿಸಿದ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ಬುಧವಾರ ನಡೆದಿದೆ.
ಗುವಾಹಟಿ: ಪ್ರಯಾಣಿಕರನ್ನು ಹೊರದಬ್ಬುವ ಸಲುವಾಗಿ ವಿಮಾನದೊಳಗೆ ಎಸಿ ಹೆಚ್ಚಿಸಿ ಹಿಮಾಲಯದಂಥ ವಾತಾವರಣ ನಿರ್ಮಿಸಿದ ಆಘಾತಕಾರಿ ಘಟನೆ ಕೋಲ್ಕತಾದಲ್ಲಿ ಬುಧವಾರ ನಡೆದಿದೆ. ಬೆಳಗ್ಗೆ 9 ಗಂಟೆಗೆ ಕೋಲ್ಕತಾದಿಂದ ಡಾರ್ಜಿಲಿಂಗ್ಗೆ ಹೊರಡಬೇಕಿದ್ದ ಏರ್ಏಷ್ಯಾ ವಿಮಾನದ ಸಂಚಾರ 2 ಗಂಟೆ ತಡವಾಗಿತ್ತು.
ಈ ವೇಳೆ ಪ್ರಯಾಣಿಕರಿಗೆ ಆಹಾರವನ್ನು ನೀಡಿರಲಿಲ್ಲ. ಕೊನೆಗೆ ಎಲ್ಲರನ್ನೂ ಕೆಳಗೆ ಇಳಿಯುವಂತೆ ಪೈಲಟ್ ಸೂಚಿಸಿದ್ದ. ಇದಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸುತ್ತಲೇ ಆತ ಎ.ಸಿಯನ್ನು ಹೆಚ್ಚಿಸಿ ಜನ ರನ್ನು ಹೊರಹಾಕುವ ಯತ್ನ ಮಾಡಿದ್ದಾನೆ. ಪೈಲಟ್ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.