Asianet Suvarna News Asianet Suvarna News

ಕಾವೇರಿ: ವಿಶೇಷಾಧಿವೇಶನ ಬೇಡಿಕೆಯನ್ನು ತಿರಸ್ಕರಿಸಿದ ಎಐಎಡಿಎಂಕೆ

AIADMK slams Karunanidhi call to convene special session over Cauvery row

ಚೆನ್ನೈ (ಸೆ.24): ಕಾವೇರಿ ಜಲವಿವಾದದ ವಿಚಾರದಲ್ಲಿ ತಮಿಳುನಾಡು ಸರ್ಕಾರ ಕೂಡಾ ವಿಶೇಷಾಧಿವೇಶನ ಕರೆಯಬೇಕೆಂದು ಡಿಎಂಕೆ ವರಿಷ್ಠ ಕರುಣಾನಿಧಿ ಬೇಡಿಕೆಯನ್ನು ಏಐಏಡಿಎಂಕೆ ತಳ್ಳಿ ಹಾಕಿದೆ.

ಕಾವೇರಿ ವಿಚಾರದಲ್ಲಿ ಅಮ್ಮ ಸಾಧಿಸಿರುವ ನಿರಂತರ ಗೆಲುವು ಕರ್ನಾಟಕ ಮಾತ್ರವಲ್ಲದೇ ಕರುಣಾನಿಧಿಯವರನ್ನು ಕೂಡಾ ರೊಚ್ಚಿಗೆಬ್ಬಿಸಿದೆ ಎಂದು ಎಐಎಡಿಎಂಕೆ ಮುಖವಾಣಿ 'ನಮಡು ಎಂಜಿಆರ್' ಬರೆದುಕೊಂಡಿದೆ.

ಸರ್ವಪಕ್ಷ ಸಭೆ, ವಿಶೇಷ ಅಧಿವೇಶನದಂತಹ ಅರ್ಥಹೀನ ಬೇಡಿಕೆಗಳನ್ನು ಮುಂದಿಡುವ ಮೂಲಕ ತಾನು ಕೂಡಾ ಕಾವೇರಿ ಹಾಗೂ ತಮಿಳು ಜನರ ಹಿತಾಸಕ್ತಿ ಬಗ್ಗೆ ಕಳಕಳಿ ಹೊಂದಿದ್ದೇನೆಂದು ಕರುಣಾನಿಧಿ ತೋರ್ಪಡಿಸಬಯಸುತ್ತಿದ್ದಾರೆ ಎಂದು ಏಐಏಡಿಎಂಕೆ ಹೇಳಿದೆ.

ಕಾವೇರಿ ವಿಚಾರದಲ್ಲಿ ಜಯಾಲಲಿತಾ 'ಶಾಶ್ವತ ಗೆಲುವಿ'ನೆಡೆಗೆ ದಾಪುಗಾಲಿಡುತ್ತಿದ್ದಾರೆ,  ಅದನ್ನು ಕರುಣಾನಿಧಿಯವರಿಂದ ಸಹಿಸಿಕೊಳ್ಳಲಾಗುತ್ತಿಲ್ಲವೆಂದು ಏಐಏಡಿಎಂಕೆ ಹೇಳಿದೆ.

Latest Videos
Follow Us:
Download App:
  • android
  • ios