ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್​ ರಿಲೀಫ್​ ಸಿಕ್ಕಿದೆ. ಎಸಿಬಿ ಎಫ್ಐಆರ್​ ಕಾನೂನು ಪಾಲಿಸಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಹೈಕೋರ್ಟ್​​ ಬಿಎಸ್​ವೈ ವಿರುದ್ಧ ಎರಡೂ ಎಫ್​ಐಆರ್​​ಗೂ ಮಧ್ಯಂತರ ತಡೆ ನೀಡಿದೆ.

ಬೆಂಗಳೂರು(ಸೆ.22): ಡಿನೋಟಿಫಿಕೇಶನ್ ಕೇಸ್​ ರಿಲೀಫ್​ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಕಿಡ್ನಾಪ್​ ಕೇಸ್​ ಬಿಸಿತಟ್ಟಿದೆ.

ಈಶ್ವರಪ್ಪ ಪಿಎ ವಿನಯ್ ಕಿಡ್ನಾಪ್​​ ಪ್ರಕರಣದಲ್ಲಿ ಬಿಎಸ್​ವೈಗೆ ನೋಟಿಸ್' ನೀಡಲಾಗಿದೆ. ಬಿಎಸ್'ವೈ ಪಿಎ ಸಂತೋಷ್​ ವಿರುದ್ಧ ಕಿಡ್ನಾಪ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ವಿಭಾಗದ ಸಹಾಯಕ ಆಯುಕ್ತರಿಂದ ನೋಟಿಸ್'ನೀಡಲಾಗಿದೆ. ಸೆ.28 ರಂದು ಗುರುವಾರ ವಿಚಾರಣೆಗೆ ಹಾಜರಾಗುವಂತೆ ಬಿಎಸ್​ವೈಗೆ ತಿಳಿಸಲಾಗಿದೆ.ವಿನಯ್ ಕೇಸ್​ನ ವಿಚಾರಣೆ ವೇಳೆಯಲ್ಲಿ ಕಿಡ್ನಾಪ್ ಸಂಚಿನ ಬಗ್ಗೆ ಆರೋಪಿಗಳು ಬಾಯಿಬಿಟ್ಟಿದ್ದರು.

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಬಿಗ್​ ರಿಲೀಫ್​ ಸಿಕ್ಕಿದೆ. ಎಸಿಬಿ ಎಫ್ಐಆರ್​ ಕಾನೂನು ಪಾಲಿಸಿಲ್ಲ ಎಂಬ ಅಭಿಪ್ರಾಯಕ್ಕೆ ಬಂದ ಹೈಕೋರ್ಟ್​​ ಬಿಎಸ್​ವೈ ವಿರುದ್ಧ ಎರಡೂ ಎಫ್​ಐಆರ್​​ಗೂ ಮಧ್ಯಂತರ ತಡೆ ನೀಡಿದೆ.