‘ರಾಜಸ್ಥಾನ ಮುಖ್ಯಮಂತ್ರಿಯಾಗುವ ಮೊದಲು ತೆಳ್ಳಗಿದ್ದ ವಸುಂಧರಾ ಈಗ ಡುಮ್ಮಿಯಾಗಿದ್ದಾರೆ’ ಎಂದಿದ್ದ ಶರದ್ ಯಾದವ್ ತಮ್ಮ ಹೆಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ನವದೆಹಲಿ[ಡಿ.09]: ‘ವಸುಂಧರಾ ರಾಜೇ ಅವರು ರಾಜಸ್ಥಾನ ಮುಖ್ಯಮಂತ್ರಿ ಆಗುವ ಮುನ್ನ ತೆಳ್ಳಗಿದ್ದರು. ಆದರೆ, ಇದೀಗ ಅವರು ಡುಮ್ಮಿಯಾಗಿದ್ದು, ಅವರಿಗೆ ವಿಶ್ರಾಂತಿಯ ಅಗತ್ಯವಿದೆ’ ಎಂಬ ತಮ್ಮ ವಿವಾದಾತ್ಮಕ ಹೇಳಿಕೆ ಬಗ್ಗೆ ಜೆಡಿಯು ಪಕ್ಷದ ಮಾಜಿ ಮುಖಂಡ ಶರದ್ ಯಾದವ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಬಗ್ಗೆ ಶನಿವಾರ ಪ್ರತಿಕ್ರಿಯೆ ನೀಡಿದ ಯಾದವ್ ಅವರು, ‘ನನ್ನ ಹೇಳಿಕೆಯಿಂದ ರಾಜೇ ಅವರಿಗೆ ನೋವಾಗಿದ್ದರೆ, ನಾನು ವಿಷಾದಿಸುತ್ತೇನೆ. ರಾಜೇ ಮತ್ತು ನಾವು ಕುಟುಂಬ ಸ್ನೇಹಿತರಾಗಿದ್ದು, ಈ ಬಗ್ಗೆ ನೇರವಾಗಿ ಅವರಿಗೆ ಪತ್ರ ಬರೆಯುವೆ’ ಎಂದು ಹೇಳಿದ್ದಾರೆ.