Asianet Suvarna News Asianet Suvarna News

23ರ ನಂತರ ಈ ಶಾಸಕ ನಮ್ಮ ದಾರಿಗೆ ಬರುತ್ತಾರೆ: ಖಂಡ್ರೆ

ಮೇ 23ರ ನಂತರ  ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗಲಿವೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇದೇ ವೇಳೆ ಕೈ ಮುಖಂಡರು ಶಾಸಕರ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. 

After May 23 Ramesh Jarkiholi Will Come With Congress Says Eshwar Khandre
Author
Bengaluru, First Published May 6, 2019, 10:40 AM IST

ಬೆಂಗಳೂರು :  ಪಕ್ಷದ ಶಾಸಕ ರಮೇಶ್‌ ಜಾರಕಿಹೊಳಿ ಅವರು ಮೇ 23ರಂದು ಪಕ್ಷ ಬಿಟ್ಟು ಹೋಗುವುದಾಗಿ ಹೇಳಿರಬಹುದು. ಆದರೆ, ಮೇ 23ರ ಬಳಿಕ ಅವರ ಸಮಸ್ಯೆ ಬಗೆಹರಿದು ಅವರೂ ಸಹ ನಮ್ಮ ದಾರಿಗೆ ಬರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಉರುಳಿಸಬೇಕು ಎಂಬುದು ಬಿಜೆಪಿಯ ಹಗಲು ಕನಸು. ಅದು ಎಂದಿಗೂ ಈಡೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ್‌ ಜಾರಕಿಹೊಳಿ ಪಕ್ಷ ಬಿಟ್ಟು ಹೋಗುವುದಿಲ್ಲ. ಅವರು ಪಕ್ಷ ಬಿಟ್ಟು ಹೋಗುವುದಕ್ಕೆ ಅವರ ಜೊತೆ ಯಾರೂ ಇಲ್ಲ. ಮೇ 23ರ ಬಳಿಕ ಹೋಗುತ್ತೇನೆ ಎಂದು ಹೇಳಿದ್ದರೂ ಅದು ಆಗುವುದಿಲ್ಲ. ಅವರು ಸಹ ನಮ್ಮ ದಾರಿಗೆ ಬರುತ್ತಾರೆ ಎಂದು ತಿಳಿಸಿದರು.

Follow Us:
Download App:
  • android
  • ios