ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದ ಶ್ರೀಶೈಲ್ ಎಂಬುವಾತನೇ ಆ ಯುವಕ. ಕುಮಾರಸ್ವಾಮಿಯವರ ಸಮ್ಮುಖದಲ್ಲೇ ಮದುವೆಯಾಗುವುದಾಗಿ ಒಂದು ವರ್ಷದಿಂದ ಹಠ ಹಿಡಿದು ಕುಳಿತಿದ್ದ.

ಬಾಗಲಕೋಟೆ: ಮದುವೆಯಾಗಬೇಕಿದ್ದ ಯುವಕನೊಬ್ಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಂದು ಆಶೀರ್ವದಿಸುವ ತನಕ ತಾಳಿಕಟ್ಟುವುದಿಲ್ಲ ಎಂದು ಹಠ ಹಿಡಿದು ಕುಳಿತ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

 ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ತೆಗ್ಗಿ ಗ್ರಾಮದ ಶ್ರೀಶೈಲ್ ಎಂಬುವಾತನೇ ಆ ಯುವಕ. ಕುಮಾರಸ್ವಾಮಿಯವರ ಸಮ್ಮುಖದಲ್ಲೇ ಮದುವೆಯಾಗುವುದಾಗಿ ಒಂದು ವರ್ಷದಿಂದ ಹಠ ಹಿಡಿದು ಕುಳಿತಿದ್ದ. ಇದೀಗ ಸ್ವತಃ ಕುಮಾರಸ್ವಾಮಿಯವರೇ ತೆರಳಿದ ಮೇಲೆ ವಧುವಿಗೆ ತಾಳಿ ಕಟ್ಟಿದ್ದಾನೆ.

ಗ್ರಾಮದ ಸೋಮಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಮದುವೆಗೆ ಹೆಚ್ ಡಿಕೆ ಖುದ್ದಾಗಿ ಹಾಜರಿದ್ದು ನೂತನ ವಧುವರರನ್ನು ಆಶೀರ್ವದಿಸಿ ಬಂದಿದ್ದಾರೆ.