Asianet Suvarna News Asianet Suvarna News

ರೈಲಿನಲ್ಲಿ ಇಲಿ ಬ್ಯಾಗ್ ಕಚ್ಚಿದ್ದಕ್ಕೆ ರೈಲ್ವೆ ಸಚಿವರಿಗೆ ದೂರು ಕೊಟ್ಟ ನಟಿಮಣಿ

ಟ್ವಿಟರ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದು, ಇಲಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ

Actress Nivedita Saraf tweets to Railway Minister Suresh Prabhu

ಮುಂಬೈ(ಸೆ.28): ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇಲಿಯೊಂದು ತನ್ನ ಬ್ಯಾಗನ್ನು ಕಡಿದುಹಾಕಿದೆ ಎಂದು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಮರಾಠಿ ನಟಿ ನಿವೇದಿತಾ ಸರ್ ದೂರು ನೀಡಿದ್ದಾರೆ. ಟ್ವಿಟರ್‌ನಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದು, ಇಲಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

‘‘ಸೆ.22ರಂದು ಲಾತೂರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಲಗಿದ್ದಾಗ ತಲೆಯ ಪಕ್ಕದಲ್ಲೆ ಇದ್ದ ಬ್ಯಾಗನ್ನು ಇಲಿ ಕಡಿದುಹಾಕಿದೆ. ಭಯಂಕರ-ಭಾರತೀಯ ರೈಲ್ವೆ- ಸುರೇಶ್‌ಪ್ರಭು,’’ ಎಂದು ಬ್ಯಾಗ್‌ನ ಚಿತ್ರ ಸಮೇತ ಅವರು ಟ್ವೀಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರೈಲ್ವೆ ಸಾರ್ವಜನಿಕ ಸಂಪರ್ಕಾಕಾರಿ, ‘‘ನಿಮ್ಮ ಟ್ವೀಟನ್ನು ದೂರಾಗಿ ಸ್ವೀಕರಿಸಲಾಗುವುದು,’’ ಎಂದಿದ್ದಾರೆ.