Asianet Suvarna News Asianet Suvarna News

ಗೋವಾದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಎಎಪಿ ಎಂಟ್ರಿ: ಪರಿಕ್ಕರ್ ದೆಹಲಿ ರಾಜಕಾರಣದಿಂದ ಬಿಜೆಪಿಗೆ ಹೊಡೆತ

ಪಂಜಾಬ್ ಚುನಾವಣೆಯಷ್ಟೇ ಕುತೂಹಲ ಕೆರಳಿಸಿರುವುದು ಕರ್ನಾಟಕಕ್ಕೆ ತಾಗಿಕೊಂಡಿರುವ ಕರಾವಳಿ  ಗೋವಾದ ವಿಧಾನ ಸಭಾ ಚುನಾವಣೆ . ಪರಂಪರಾಗತವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ಪಕ್ಷವನ್ನು ಆಯ್ದುಕೊಳ್ಳುತ್ತಿದ್ದ ಗೋವಾ ಮತದಾರರ ಎದುರು ಈಗ ಮೂರನೇ ವಿಕಲ್ಪವಾಗಿ ಆಮ್ ಆದ್ಮಿ ಪಕ್ಷ ಕೂಡ ಕಾಣಿಸಿಕೊಂಡಿದ್ದು ನೇರ ಹಣಾಹಣಿ ಈಗ ತ್ರಿಕೋಣ ಸ್ವರೂಪವನ್ನು ತಾಳುತ್ತಿದೆ .

AAP Entered In Goa State Politics

ಗೋವಾ(ಜ.07): ಪಂಜಾಬ್ ಚುನಾವಣೆಯಷ್ಟೇ ಕುತೂಹಲ ಕೆರಳಿಸಿರುವುದು ಕರ್ನಾಟಕಕ್ಕೆ ತಾಗಿಕೊಂಡಿರುವ ಕರಾವಳಿ  ಗೋವಾದ ವಿಧಾನ ಸಭಾ ಚುನಾವಣೆ . ಪರಂಪರಾಗತವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಒಂದು ಪಕ್ಷವನ್ನು ಆಯ್ದುಕೊಳ್ಳುತ್ತಿದ್ದ ಗೋವಾ ಮತದಾರರ ಎದುರು ಈಗ ಮೂರನೇ ವಿಕಲ್ಪವಾಗಿ ಆಮ್ ಆದ್ಮಿ ಪಕ್ಷ ಕೂಡ ಕಾಣಿಸಿಕೊಂಡಿದ್ದು ನೇರ ಹಣಾಹಣಿ ಈಗ ತ್ರಿಕೋಣ ಸ್ವರೂಪವನ್ನು ತಾಳುತ್ತಿದೆ .

ಪಂಜಾಬ್ ಚುನಾವಣೆಯಷ್ಟೇ ಕುತೂಹಲ ಹುಟ್ಟಿಸಿದ್ದು ಗೋವಾ ಎಲೆಕ್ಷನ್. ೨೦೧೨ರಲ್ಲಿ ಬಿಜೆಪಿ ಮರಳಿ ಅಧಿಕಾರ

ಹಿಡಿಯಲು ಸಾಧ್ಯವಾಗಿದ್ದು ಮನೋಹರ ಪರಿಕ್ಕರ್ ನಾಯಕತ್ವದಿಂದ. ಕಟ್ಟಾ ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದರು ಕೂಡ ಮನೋಹರ ಪರಿಕ್ಕರ್'​ಗೆ ಗೋವಾದ ೪೦ ರಲ್ಲಿ ಬಹುತೇಕ ಸೀಟ್'ಗಳಲ್ಲಿ ನಿರ್ಣಾಯಕ ಎನಿಸಿಕೊಂಡಿದ್ದು ಕ್ರಿಶ್ಚಿಯನ್ ಮತದಾರರು. ಆದರೆ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವರಾಗಿ ದೆಹಲಿಗೆ ಹೋಗಿದ್ದರಿಂದ ಬಿಜೆಪಿಯನ್ನು ಬ್ಯಾಕ್ ಫುಟ್'ಗೆ ತಳ್ಳಿದೆ. ಇನ್ನೂ ೨೦೧೨ ರ ಸೋಲಿನ ನಂತರವೂ ಕಾಂಗ್ರೆಸ್ ಚೇತರಿಸಿಕೊಂಡಿಲ್ಲ. ಮಾಜಿ ಸಿಎಂ ದಿಗಂಬರ ಕಾಮತ್ ಸೇರಿದಂತೆ ಬಹುತೇಕರ ವಿರುದ್ಧದ ಭ್ರ್ರಷ್ಟಾಚಾರ ಪ್ರಕರಣಗಳು ಕಾಂಗ್ರೆಸ್​'ಗೆ ಸಮಸ್ಯೆಯಾಗಿದೆ. ಇದಕ್ಕಿಂತಲೂ ಹೆಚ್ಚು ಟೆನ್ಷನ್ ಆಮ್ ಆದ್ಮಿ ಪಕ್ಷ ಕೂಡ ಗೋವಾದಲ್ಲಿ  ಬೆಳೆಯುತ್ತಿರುವುದು ಕ್ರಿಶ್ಚಿಯನ್ ಮತದಾರರ ಮೇಲೆ ಕಣ್ಣಿಟ್ಟಿರುವುದು.

ಬಿಜೆಪಿ ಗಿರುವ ದೊಡ್ಡ ಚಿಂತೆ ಆರ್ ಎಸ್ ಎಸ್ ಕೇಡರ್ನಲ್ಲಿರುವ ಅಸಮಾಧಾನ . ಇಂಗ್ಲಿಷ್ ಶಾಲೆಗಳ ಅನುದಾನ ಕಡಿತಗೊಳಿಸಲು ಕ್ರಿಶ್ಚಿಯನ್ ಪ್ರೇಮದ ಕಾರಣದಿಂದ ಹಿಂದೇಟು ಹಾಕಿದರು ಅನ್ನೋ ಕಾರಣಕ್ಕೆ ಆರ್ ಎಸ್ ಎಸ್ ನಾಯಕರಾಗಿದ್ದ ಸುಭಾಷ ವೆಲಿಂಗಿಕರ್ ಹೊಸ ಪ್ರಾದೇಶಿಕ ಪಕ್ಷವನ್ನೇ ಸ್ಥಾಪಿಸಿದ್ದು ಬಿಜೆಪಿ ಯ ಹಳೆಯ ಮಿತ್ರ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದೊಂದಿಗೆ ಮೈತ್ರಿ ಕೂಡ ಮಾಡಿಕೊಂಡಿದ್ದಾರೆ . ಹೊಸ ಪಕ್ಷ ಹಿಂದೂ ಮತಗಳನ್ನು ಒಡೆದರೆ ಅನ್ನೋ ಭೀತಿ ಕೂಡ ಬಿಜೆಪಿಗಿದೆ.

ಇನ್ನೂ ಎಲೆಕ್ಷನ್ ಕಾರಣದಿಂದಲೇ ಕೇಂದ್ರ ಎಷ್ಟೇ ಒತ್ತಡ ಹೇರಿದರೂ ಮಹದಾಯಿ ಮಾತುಕತೆಗೂ ಗೋವಾ ಸರ್ಕಾರ ಹಿಂದೇಟು ಹಾಕಿದೆ ಅನ್ನೋದು ಗಮನಾರ್ಹ. ಒಟ್ಟಿನಲ್ಲಿ  ಈ ಬಾರಿ ಗೋವಾದಲ್ಲಿ ಕಾಂಗ್ರೆಸ್-ಬಿಜೆಪಿ ಮಧ್ಯೆ ಎಎಪಿ ಎಂಟ್ರಿ ಭಾರೀ ಕುತೂಹಲ ಹುಟ್ಟಿಸಿದೆ.

Follow Us:
Download App:
  • android
  • ios