ಅನಾರೋಗ್ಯದಿಂದ ನಿರಂತರ ಎರಡು ತಿಂಗಳ ಕಾಲ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರ ಸಾವು ಸಹಜವಲ್ಲ ಎಂಬ ಆರೋಪಗಳಿಗೆ ಇದೀಗ ಮತ್ತಷ್ಟು ರೆಕ್ಕೆ ಪುಕ್ಕಗಳು ಸಿಕ್ಕಿವೆ.

ಚೆನ್ನೈ(ಸೆ.24): ಅನಾರೋಗ್ಯದಿಂದ ನಿರಂತರ ಎರಡು ತಿಂಗಳ ಕಾಲ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜೆ.ಜಯಲಲಿತಾ ಅವರ ಸಾವು ಸಹಜವಲ್ಲ ಎಂಬ ಆರೋಪಗಳಿಗೆ ಇದೀಗ ಮತ್ತಷ್ಟು ರೆಕ್ಕೆ ಪುಕ್ಕಗಳು ಸಿಕ್ಕಿವೆ.

Add Asianetnews Kannada as a Preferred SourcegooglePreferred

ಜಯಾ ಅವರು ಚಿಕಿತ್ಸೆಗಾಗಿ ಅಪೋಲೊ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ಪಕ್ಷದ ಅಥವಾ ಸರ್ಕಾರದ ಯಾವೊಬ್ಬ ವ್ಯಕ್ತಿ ಸಹ ಜಯಾರನ್ನು ಭೇಟಿಯೇ ಮಾಡಿಲ್ಲ ಎಂದು ಖುದ್ದು ಅಣ್ಣಾ ಡಿಎಂಕೆಯ ಸಚಿವರೊಬ್ಬರು ಹೇಳಿದ್ದಾರೆ. ‘ಜಯಾರನ್ನು ನಾವ್ಯಾರೂ ಭೇಟಿ ಮಾಡಿರಲಿಲ್ಲ. ಆದರೆ ಶಶಿಕಲಾ ಅವರ ಹೆದರಿಕೆಯಿಂದಾಗಿ, ಜಯಾರನ್ನು ಭೇಟಿ ಮಾಡಿದ್ದೇವೆ. ಅವರು ಇಡ್ಲಿ ಸೇವಿಸಿದ್ದಾರೆ ಎಂದು ಅವರ ಆರೋಗ್ಯ ಸ್ಥಿತಿ ಕುರಿ ತು ನಾವು ಅಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೆವು. ಆದರೆ, ಅವುಗಳೆಲ್ಲವೂ ಶುದ್ಧ ಸುಳ್ಳು. ನಮ್ಮ ಸುಳ್ಳುಗಳನ್ನು ಜನರು ಮನ್ನಿಸಬೇಕು’ ಎಂಬ ಸ್ಫೋಟಕ ಸತ್ಯವನ್ನು ಅರಣ್ಯ ಸಚಿವ ಸಿ.ಶ್ರೀನಿವಾಸನ್ ಬಾಯ್ಬಿಟ್ಟಿದ್ದಾರೆ.

ಮದುರೈನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವ ಶ್ರೀನಿವಾಸನ್, ಜಯಾ ಅವರ ಭೇಟಿಗೆ ಬಂದಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿ ಇತರ ರಾಷ್ಟ್ರೀಯ ನಾಯಕರು ಸಹ ಅಪೋಲೊ ಆಸ್ಪತ್ರೆಗಳ ಮುಖ್ಯಸ್ಥ ಪ್ರತಾಪ್ ರೆಡ್ಡಿ ಅವರ ಕೋಣೆಯಲ್ಲೇ ಕೂತು ಎದ್ದು ಬಂದಿದ್ದರು. ಪಕ್ಷದ ರಹಸ್ಯ ಮಾಹಿತಿಗಳು ಹೊರ ಬೀಳಬಾರದು ಎಂಬ ಕಾರಣಕ್ಕಾಗಿ ನಾವೆಲ್ಲರೂ ಸುಳ್ಳು ಹೇಳಬೇಕಾಯಿತು.

ಆದರೆ, ವಿ.ಕೆ.ಶಶಿಕಲಾ ಅವರು ಮಾತ್ರವೇ ವೈದ್ಯರ ಸಲಹೆ ಮೇರೆಗೆ ಎರಡು ನಿಮಿಷಗಳ ಕಾಲ ಜಯಾ ಅವರ ಕೋಣೆಗೆ ಪ್ರವೇಶಿಸುತ್ತಿದ್ದರು ಎಂದು ಹೇಳಿದರು.

ಟಿಟಿವಿ ನಕಾರ: ಆದರೆ, ಈ ಆರೋಪ ತಳ್ಳಿಹಾಕಿರುವ ಅಣ್ಣಾ ಡಿಎಂಕೆ ಪದಚ್ಯುತ ನಾಯಕ, ಶಶಿಕಲಾರ ಬಂದು ಟಿಟಿವಿ ದಿನಕರನ್, ‘ಜಯಾ ಚಿಕಿತ್ಸೆಯ ವಿಡಿಯೋ ನನ್ನ ಬಳಿ ಇದೆ. ಸೂಕ್ತ ಸಂದ‘ರ್ದಲ್ಲಿ ತನಿಖಾ ಆಯೋಗಕ್ಕೆ ನೀಡುವೆ’ ಎಂದು ಕೊಡಗಿನಲ್ಲಿ ಹೇಳಿದ್ದಾರೆ.