ಬಿಜೆಪಿ ಸೇರಿದ್ದಕ್ಕೆ ಯುವಕನನ್ನು ಗಲ್ಲಿಗೇರಿಸಿ ಹತ್ಯೆ
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯ ವೇಳೆ ಉಂಟಾದ ಹಿಂಸಾಚಾರ ಮುಂದುವರಿದಿದ್ದು, ಬಿಜೆಪಿ ಕಾರ್ಯ ಕರ್ತನೊಬ್ಬನನ್ನು ಮರಕ್ಕೆ ನೇತುಹಾಕಿ ಹತ್ಯೆ ಮಾಡಿರುವ ಘಟನೆ ಬಲರಾಮ್ಪುರ ಪಟ್ಟಣದ ಪುರುಳಿಯಾದಲ್ಲಿ ನಡೆದಿದೆ. ಬಿಜೆಪಿ ಸೇರಿದ್ದಕ್ಕೆ ಯುವಕನನ್ನು ಹತ್ಯೆ ಮಾಡಲಾಗಿದೆ ಎಂದು ಟಿ- ಶರ್ಟ್ ಮೇಲೆ ಬರೆಯಲಾಗಿದೆ.
ಕೊಲ್ಕತ್ತಾ (ಮೇ. 31): ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯ ವೇಳೆ ಉಂಟಾದ ಹಿಂಸಾಚಾರ ಮುಂದುವರಿದಿದ್ದು, ಬಿಜೆಪಿ ಕಾರ್ಯಕರ್ತನೊಬ್ಬನನ್ನು ಮರಕ್ಕೆ ನೇತುಹಾಕಿ ಹತ್ಯೆ ಮಾಡಿರುವ ಘಟನೆ ಬಲರಾಮ್ಪುರ ಪಟ್ಟಣದ ಪುರುಳಿಯಾದಲ್ಲಿ ನಡೆದಿದೆ. ಬಿಜೆಪಿ ಸೇರಿದ್ದಕ್ಕೆ ಯುವಕನನ್ನು ಹತ್ಯೆ ಮಾಡಲಾಗಿದೆ ಎಂದು ಟಿ- ಶರ್ಟ್ ಮೇಲೆ ಬರೆಯಲಾಗಿದೆ.
ಬಂಗಾಳಿಯಲ್ಲಿ ಬರೆದ ಇನ್ನೊಂದು ಪತ್ರ ಲಭ್ಯವಾಗಿದ್ದು, ‘೧೮ ವರ್ಷದಲ್ಲೇ ಬಿಜೆಪಿ ರಾಜಕೀಯ ಮಾಡಿದ್ದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಮತದಾನ ನಡೆದ ದಿನದಿಂದಲೂ ಹತ್ಯೆಗೆ ಯತ್ನಿಸಲಾಗುತ್ತಿತ್ತು. ಇಂದು ನೀನು ಸಾವನ್ನಪ್ಪಿದ್ದೀಯ’ ಎಂದು ಬರೆಯಲಾಗಿದೆ.