ಪೊಲೀಸ್ ಪರೇಡ್ ಸೆಲೆಕ್ಷನ್ ವೇಳೆ ಯುವಕ ಸಾವು
ಕೆಎಸ್'ಆರ್'ಪಿ ಸೆಲೆಕ್ಷನ್'ಗೆ ಬಂದ ಯುವಕ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುತ್ತಿದ್ದ ಸೆಲೆಕ್ಷನ್'ನಲ್ಲಿ ರನ್ನಿಂಗ್ ಮಾಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ.
ಕಲ್ಬುರ್ಗಿ (ಜ.31): ಕೆಎಸ್'ಆರ್'ಪಿ ಸೆಲೆಕ್ಷನ್'ಗೆ ಬಂದ ಯುವಕ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುತ್ತಿದ್ದ ಸೆಲೆಕ್ಷನ್'ನಲ್ಲಿ ರನ್ನಿಂಗ್ ಮಾಡುತ್ತಿದ್ದ ವೇಳೆ ಸಾವನ್ನಪ್ಪಿದ್ದಾರೆ.
ವಿಕಾಸ್ ಗಾಯಕವಾಡ ಸಾವನ್ನಪ್ಪಿದ ಯುವಕ. ಕಲಬುರ್ಗಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆಯುತ್ತಿದ್ದ ಸೆಲೆಕ್ಷನ್'ನಲ್ಲಿ ರನ್ನಿಂಗ್ ಮಾಡುತ್ತಿದ್ದ ವೇಳೆ ವಿಕಾಸ್ ಸಾವನ್ನಪ್ಪಿದ್ದಾರೆ. ಬೀದರ ಜಿಲ್ಲೆಯ ಬಸವಕಲ್ಯಾಣ ನಿವಾಸಿ ಇವರು. ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆಸ್ಪತ್ರೆಗೆ ಐಜಿ ಮುರುಗನ್ ಹಾಗೂ ಎಸ್ಪಿ ಎನ್ ಶಶಿಕುಮಾರ ಭೇಟಿ ನೀಡಿದ್ದಾರೆ.