ನಮ್ಮ ದೇಶದ ಕೆಲ ಭ್ರಷ್ಟ ಆಮದುದಾರರು ಚೀನಾ ಜೊತೆ ಕೈಜೋಡಿಸಿ ತೆರಿಗೆ ವಂಚಿಸಿ ಹವಾಲ ಮೂಲಕ ವ್ಯವಹಾರ ಮಾಡುತ್ತಿರೋ ಡೆಡ್ಲಿ ಸೀಕ್ರೆಟ್​ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ನಡೆಸಿರೋ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು ಮಾಡಿತ್ತು.

ಚೀನಾ ವಸ್ತು ಹಾಗೂ ಯಂತ್ರಗಳ ಕಳ್ಳ ಸಾಗಣೆ ಕುರಿತು ಸುವರ್ಣನ್ಯೂಸ್ ಕವರ್ ಸ್ಟೋರಿ ತಂಡ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ನಮ್ಮ ದೇಶದ ಕೆಲ ಭ್ರಷ್ಟ ಆಮದುದಾರರು ಚೀನಾ ಜೊತೆ ಕೈಜೋಡಿಸಿ ತೆರಿಗೆ ವಂಚಿಸಿ ಹವಾಲ ಮೂಲಕ ವ್ಯವಹಾರ ಮಾಡುತ್ತಿರೋ ಡೆಡ್ಲಿ ಸೀಕ್ರೆಟ್​ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ನಡೆಸಿರೋ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲು ಮಾಡಿತ್ತು. ಇದೀಗ ಸುವರ್ಣನ್ಯೂಸ್ ವರದಿಯಿಂದ ಎಚ್ಚೆತ್ತ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್, ಎಲ್ಲೆಲ್ಲಿ ಚೀನಾ ತೂಕ ಯಂತ್ರ ಬಳಸಿ ಗ್ರಾಹಕರಿಗೆ ಮೋಸ ಮಾಡಲಾಗುತ್ತಿದೆಯೋ ಆ ಎಲ್ಲಾ ಕಡೆ ದಾಳಿ ನಡೆಸಿದ್ದೇವೆ. ಸುಮಾರು 394 ಕಡೆ ದಾಳಿ ನಡೆಸಿ ಒಟ್ಟು 71 ಕೇಸ್ ದಾಖಲಿಸಲಾಗಿದೆ ಎಂದು ಸುವರ್ಣ ನ್ಯೂಸ್​ಗೆ ತಿಳಿಸಿದ್ದಾರೆ.