ಇದೇ ಮಾರಾಟಗಾರರ ಸಂಘ ಈ ವರ್ಷದ ಜೂನ್ ತಿಂಗಳಲ್ಲಿ  ದಿನನಿತ್ಯದ ಬೆಲೆ ಪರಿಷ್ಕರಣೆಯನ್ನು ವಿರೋಧಿಸಿ ಬಂದ್'ಗೆ ಕರೆ ನೀಡಿತ್ತು.

ನವದೆಹಲಿ(ಅ.07): ಕೇಂದ್ರ ಸರ್ಕಾರದ ನಿಯಮಾವಳಿಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲಭಾರತಪೆಟ್ರೋಲ್ಬಂಕ್ಮಾಲೀಕರಸಂಘ ಬಂದ್'ಗೆ ಕರೆ ನೀಡಿದೆ.

ದೇಶದ 54 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ಬಂಕ್'ಗಳು ಅ.12ರ ಮಧ್ಯರಾತ್ರಿಯಿಂದ ಅ.13 ರ ಮಧ್ಯರಾತ್ರಿಯವರೆಗೂ ಬಂದ್'ಗೆ ಕರೆ ನೀಡಿದೆ. ಇದೇ ಮಾರಾಟಗಾರರ ಸಂಘ ಈ ವರ್ಷದ ಜೂನ್ ತಿಂಗಳಲ್ಲಿದಿನನಿತ್ಯದ ಬೆಲೆ ಪರಿಷ್ಕರಣೆಯನ್ನು ವಿರೋಧಿಸಿ ಬಂದ್'ಗೆ ಕರೆ ನೀಡಿತ್ತು. ನಂತರ ಕೇಂದ್ರ ಸರ್ಕಾರ ಮಧ್ಯರಾತ್ರಿಯ ಬದಲಾಗಿ ಬೆಳಿಗ್ಗೆ 6 ಗಂಟೆಗೆ ಬದಲಿಸುವುದಾಗಿ ಹೇಳಿದ ನಂತರ ಬಂದ್ ಕೈಬಿಡಲಾಗಿತ್ತು.

ಭಾರತದ ಅತೀ ದೊಡ್ಡ ತೈಲ ಮಾರಾಟ ಸಂಸ್ಥೆಯಾದ ಐಒಸಿ ನಿತ್ಯ ಬೆಲೆ ಪರಿಷ್ಕರಣೆಯ ಮಾಹಿತಿಯನ್ನುಎಲ್'ಇಡಿ ಪರದೆ, ಟೋಲ್ ನಂಬರ್ ಸಾಮಾಜಿಕ ಮಾಧ್ಯಮಗಳು, ಮೊಬೈಲ್ ಆಪ್ ಮೂಲಕ ನೀಡುವುದಾಗಿ ಈ ಮೊದಲು ತಿಳಿಸಿತ್ತು.