ಆನೇಕಲ್'ನಲ್ಲಿ ಕಲುಷಿತ ನೀರು ಕುಡಿದು 60 ಕಾರ್ಮಿಕರು ಅಸ್ವಸ್ಥ
ಅಸ್ವಸ್ಥರೆಲ್ಲರೂ ಸಿಲ್ವರ್ ಕ್ರಷ್ಟ್ ಗಾರ್ಮೆಂಟ್ಸ್ ನೌಕರರಾಗಿದ್ದಾರೆ. ಅಸ್ವಸ್ಥರನ್ನು ಸರ್ಜಾಪುರ, ಚಂದಾಪುರ ,ಅತ್ತಿಬೆಲೆಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಒಂದು ಹಾಸಿಗೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆನೇಕಲ್(ಮೇ.28): ಆನೇಕಲ್'ನ ಬಿಲ್ಲಾಪುರದಲ್ಲಿ ಕಲುಷಿತ ನೀರು ಕುಡಿದು 60ಕ್ಕೂ ಹೆಚ್ಚು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ.
ಅಸ್ವಸ್ಥರೆಲ್ಲರೂ ಸಿಲ್ವರ್ ಕ್ರಷ್ಟ್ ಗಾರ್ಮೆಂಟ್ಸ್ ನೌಕರರಾಗಿದ್ದಾರೆ. ಅಸ್ವಸ್ಥರನ್ನು ಸರ್ಜಾಪುರ, ಚಂದಾಪುರ ,ಅತ್ತಿಬೆಲೆಯ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಒಂದು ಹಾಸಿಗೆಯಲ್ಲಿ ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.