ರಾಜಾಕಾಲುವೆ ಹೂಳು ತೆಗೆಯುವ ವೇಳೆ ಅವಘಡ; ನಾಲ್ಕಂಸ್ತಿನ ಶಾಲಾ ಕಟ್ಟಡ ಕುಸಿತ
ಬಿಬಿಎಂಪಿಯಿಂದ ರಾಜಕಾಲುವೆ ಹೂಳು ತೆಗೆಯುವ ವೇಳೆ ಅವಘಡ ಸಂಭವಿಸಿದೆ.
ಬೆಂಗಳೂರು (ನ.23): ಬಿಬಿಎಂಪಿಯಿಂದ ರಾಜಕಾಲುವೆ ಹೂಳು ತೆಗೆಯುವ ವೇಳೆ ಅವಘಡ ಸಂಭವಿಸಿದೆ.
ಮುನ್ನರಾಯನ ಪಾಳ್ಯದಲ್ಲಿರುವ ರಾಜಕಾಲುವೆಯಲ್ಲಿನ ಹೂಳು ತೆಗೆಯುವ ವೇಳೆ ಪಕ್ಕದಲ್ಲಿರುವ ಬಿಬಿಎಂಪಿಗೆ ಶಾಲೆಯ ಪಾಯದ ಕೆಳಮಟ್ಟದಲ್ಲಿನ ಮಣ್ಣು ಕುಸಿದಿದೆ. ಶಾಲೆಯ ಪಾಯದ ಮಣ್ಣು ಕುಸಿದು ಶಾಲಯ ಕಟ್ಟಡಕ್ಕೆ ಹಾನಿಯಾಗಿದ್ದು, ನಾಲ್ಕು ಅಂತಸ್ತಿನ ಸರ್ಕಾರಿ ಕಟ್ಟಡ ಕುಸಿದಿದೆ. ಘಟನೆಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬಿಬಿಎಂಪಿ ಶಾಲೆ ಮಕ್ಕಳು ಈಗಾಗಲೇ ಬೇರೆಡೆಗೆ ಸ್ಥಳಾಂತರಮಾಡಲಾಗಿದೆ.