ಮೊಹ್ಮದ್ ಸಾಧಿಕ್ ಅಲಿಯಾಸ್ ಮಹ್ಮದ್ ಮಜರ್, ಮೊಹ್ಮದ್ ಮುಜೀಮುಲ್ಲಾ ಅಲಿಯಾಸ್ ಮೌಲ ಮುಜೀಬ್, ವಾಸೀಂ ಅಹ್ಮದ್, ಇರ್ಫಾನ್ ಪಾಷ ಬಂಧಿತ ಆರೋಪಿಗಳು.

ಬೆಂಗಳೂರು(ಅ.27):ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನ ಕುರಿತಂತೆ ಬೆಳಗ್ಗಿನಿಂದ ಸುವರ್ಣ ನ್ಯೂಸ್ ಮಾಡುತ್ತಿದ್ದ ವರದಿಯನ್ನ ನಗರ ಪೊಲೀಸ್ ಆಯುಕ್ತ ಮೇಘರಿಕ್​ ಖಚಿತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೇಘರಿಕ್, ಬೆಳಗ್ಗೆ ಮೂವರು ಆರೋಪಿಗಳನ್ನ ಬಂಧಿಸಲಾಗಿತ್ತು. ಸಂಜೆ ನಾಲ್ಕನೇ ಆರೋಪಿ ಇರ್ಫಾನ್`ನನ್ನೂ ಬಂಧಿಸಲಾಗಿದ್ದು, ಪ್ರಕರಣ ಸಂಬಂಧ ಒಟ್ಟು 4 ಆರೋಪಿಗಳ ಬಂಧನವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊಹ್ಮದ್ ಸಾಧಿಕ್ ಅಲಿಯಾಸ್ ಮಹ್ಮದ್ ಮಜರ್, ಮೊಹ್ಮದ್ ಮುಜೀಮುಲ್ಲಾ ಅಲಿಯಾಸ್ ಮೌಲ ಮುಜೀಬ್, ವಾಸೀಂ ಅಹ್ಮದ್, ಇರ್ಫಾನ್ ಪಾಷ ಬಂಧಿತ ಆರೋಪಿಗಳು.

CLICK HERE.. ರುದ್ರೇಶ್ ಹಂತಕರು ಯಾವ ಸಂಘಟನೆಗೆ ಸೇರಿದವರು ಗೊತ್ತಾ..?

ಈ ಎಲ್ಲಾ ಆರೋಪಿಗಳು ಸಹ ಸ್ಥಳೀಯರೇ ಆಗಿದ್ದು, ಆರೋಪಿಗಳಿಂದ 2 ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ. ರುದ್ರೇಶ್ ಬೆಳವಣಿಗೆ ಸಹಿಸಲಾಗದೆ ಹತ್ಯೆ ಮಾಡಲಾಗಿದೆ. ಆರೋಪಿಗಳ ಬಂಧನದಿಂದ ರಿಲೀಫ್ ಸಿಕ್ಕಿದೆ ಎಂದು ಮೇಘರಿಕ್ ಹೇಳಿದ್ಧಾರೆ.

​ಬಂಧಿತರು ಮೋಟಾರ್ ಮೆಕ್ಯಾನಿಕ್​ಗಳಾಗಿ ಕೆಲಸ ಮಾಡುತ್ತಿದ್ದರು. ಸಮುದಾಯಕ್ಕೆ ಕಿರುಕುಳ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್​.ಎಸ್​. ಮೇಘರಿಕ್​ ಹೇಳಿದ್ದಾರೆ.