ಕೈಗಾರಿಕಾ ಕ್ಷೇತ್ರದಿಂದ ಸೋರಿಕೆಯಾದ ವಿಷಾನಿಲದ ಪರಿಣಾಮ ಸುಮಾರು 30 ಮಂಗಗಳು ಮತ್ತು 14 ಪಾರಿವಾಳಗಳು ಮೃತಪಟ್ಟಿರುವ ದುರಂತ ಘಟನೆ ಮಹಾರಾಷ್ಟ್ರದಲ್ಲಿ ಸಣಭವಿಸಿದೆ.

ರಾಯಗಢ(ಮಹಾರಾಷ್ಟ್ರ)[ಡಿ.17]: ಇಲ್ಲಿನ ಕೈಗಾರಿಕೆಯೊಂದರಿಂದ ಸೋರಿಕೆಯಾದ ವಿಷಾನಿಲದ ಪರಿಣಾಮ ಸುಮಾರು 30 ಮಂಗಗಳು ಮತ್ತು 14 ಪಾರಿವಾಳಗಳು ಮೃತಪಟ್ಟಿರುವ ದುರಂತ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಸಾಯನ ಸಂಗ್ರಹಿಸಲಾಗಿದ್ದ ಟ್ಯಾಂಕ್‌ನಿಂದ ವಿಷಾನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿರಬಹುದು ಎಂದು ಕೈಗಾರಿಕೆ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ. ಘಟಕದಿಂದ ವಿಷಾನಿಲ ಸೋರಿಕೆಯಿಂದಾದ ಈ ಘಟನೆ ನಿಜಕ್ಕೂ ದುರದೃಷ್ಟಕರ ಎಂದು ರಾಯಗಢ ಜಿಲ್ಲಾಧಿಕಾರಿ ವಿಜಯ್‌ ಸೂರ್ಯವಂಶಿ ಹೇಳಿದ್ದಾರೆ.

ಘಟನೆ ಬೆನ್ನಲ್ಲೇ, ಅರಣ್ಯ ಇಲಾಖೆ, ಮಹಾರಾಷ್ಟ್ರ ಮಾಲಿನ್ಯ ನಿಇಯಂತ್ರಣ ಮಂಡಳಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.