2016 ರಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಡಾ. ರಾಜ್'ಕುಮಾರ್ ಜನ್ಮ'ದಿನದಂದೇ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ವಾರ್ತೆ ಇಲಾಖೆಗೆ ಸೂಚನೆ ಕೊಟ್ಟಿದ್ದೆ.ಅದರಂತೆ ಇಂದು ಪ್ರದಾನ ಮಾಡಿದ್ದೇವೆ.ಇದು ಪ್ರತಿ ವರ್ಷ ಮುಂದುವರಿಯುತ್ತದೆ. ಮುಂದಿನ ವರ್ಷದಿಂದ ಬೆಂಗಳೂರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಸರ್ಕಾರದ ವತಿಯಿಂದ ಡಾ.ರಾಜ್ ಕುಮಾರ್ ಜನ್ಮದಿನ ಆಚರಣೆ ಮಾಡಲಾಗುವುದು ಜೊತೆಗೆ ಕನ್ನಡ ಸಂಘದಲ್ಲಿ ಡಾ. ರಾಜ್ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಬೆಂಗಳೂರು(ಏ.22): ಮಲ್ಟಿ'ಫ್ಲೆಕ್ಸ್'ಗಳಲ್ಲಿ ಇನ್ಮುಂದೆ ಟಿಕೆಟ್ ದರ 200 ರೂ. ನಿಗದಿಪಡಿಸುವುದರ ಜೊತೆ ಮಲ್ಟಿಫ್ಲೆಕ್ಸ್'ಗಳಲ್ಲಿ ದಿನಕ್ಕೆ 2 ಶೋಗಳನ್ನು ಕನ್ನಡ ಚಿತ್ರ ಪ್ರದರ್ಶಿಸಲು ನಾಳೆ ಅಥವಾ ನಾಡಿದ್ದು ಸರ್ಕಾರಿ ಆದೇಶ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2016 ರಿಂದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ಡಾ. ರಾಜ್'ಕುಮಾರ್ ಜನ್ಮ'ದಿನದಂದೇ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಬೇಕು ಎಂದು ವಾರ್ತೆ ಇಲಾಖೆಗೆ ಸೂಚನೆ ಕೊಟ್ಟಿದ್ದೆ.ಅದರಂತೆ ಇಂದು ಪ್ರದಾನ ಮಾಡಿದ್ದೇವೆ.ಇದು ಪ್ರತಿ ವರ್ಷ ಮುಂದುವರಿಯುತ್ತದೆ. ಮುಂದಿನ ವರ್ಷದಿಂದ ಬೆಂಗಳೂರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ಸರ್ಕಾರದ ವತಿಯಿಂದ ಡಾ.ರಾಜ್ ಕುಮಾರ್ ಜನ್ಮದಿನ ಆಚರಣೆ ಮಾಡಲಾಗುವುದು ಜೊತೆಗೆ ಕನ್ನಡ ಸಂಘದಲ್ಲಿ ಡಾ. ರಾಜ್ ಪ್ರತಿಮೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
