ಮೈಸೂರು ಎಸ್’ಪಿ ರವಿ.ಡಿ ಚನ್ನಣ್ಣನವರ್ ವರ್ಗಾವಣೆ
ಚುನಾವಣೆ ಹೊಸ್ತಿಲಲ್ಲೇ 18 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಶುಕ್ರವಾರ ವರ್ಗಾಯಿಸಿದೆ.
ಬೆಂಗಳೂರು: ಚುನಾವಣೆ ಹೊಸ್ತಿಲಲ್ಲೇ 18 ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಶುಕ್ರವಾರ ವರ್ಗಾಯಿಸಿದೆ. ಅಧಿಕಾರಿಗಳ ಹೆಸರು ಮತ್ತು ಹೊಸ ಹುದ್ದೆ ಇಂತಿದೆ. ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರು ಎಸ್ಪಿ ರವಿ ಚನ್ನಣ್ಣವರ, ಸಾರಿಗೆ ಆಯುಕ್ತ ಬಿ. ದಯಾನಂದ ಅವರು ವರ್ಗಾವಣೆ ಆದವರಲ್ಲಿ ಪ್ರಮುಖರು. ರವಿ ಅವರನ್ನು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಆಗಿ ವರ್ಗಾಯಿಸಲಾಗಿದೆ.
*ಬೆಂಗಳೂರು ಸಾರಿಗೆ ಸುರಕ್ಷತಾ ವಿಭಾಗದ
ಆಯುಕ್ತರಾಗಿದ್ದ ಬಿ. ದಯಾನಂದ, ಐಜಿಪಿ,
*ಕೇಂದ್ರ ವಲಯ ಐಜಿಪಿಯಾಗಿದ್ದ ಅಮೃತ್
ಪೌಲ್, ಐಜಿಪಿ, ಆಡಳಿತ ವಿಭಾಗ, ಬೆಂಗಳೂರು
* ಬೆಂಗಳೂರು ಆಡಳಿತ ವಿಭಾಗದ ಐಜಿಪಿ
ಉಮೇಶ್ ಕುಮಾರ್, ಐಜಿಪಿ, ಗೃಹ ಇಲಾಖೆ,
ಬೆಂಗಳೂರು
*ಬೆಂಗಳೂರು ಅಗ್ನಿಶಾಮಕ ವಿಭಾಗದ ಐಜಿಪಿ
ಸೌಮೇಂದು ಮುಖರ್ಜಿ, ಐಜಿಪಿ, ಹೆಚ್ಚುವರಿ
ನಿರ್ದೇಶಕ, ಅಗ್ನಿಶಾಮಕ ದಳ, ಬೆಂಗಳೂರು
* ಬೆಂಗಳೂರು ಕೆಎಸ್ಸಾರ್ಟಿಸಿ ವಿಚಕ್ಷಣ ವಿಭಾಗದ
ನಿರ್ದೇಶಕ ಎಸ್.ರವಿ, ಐಜಿಪಿ, ಬಳ್ಳಾರಿ ವಲಯ
*ಮೈಸೂರು ದಕ್ಷಿಣ ವಲಯ ಐಜಿಪಿ ವಿಪುಲ್
ಕುಮಾರ್, ಐಜಿಪಿ, ಕರ್ನಾಟಕ ಪೊಲೀಸ್
ಅಕಾಡೆಮಿ, ಮೈಸೂರು
* ಬಳ್ಳಾರಿ ವಲಯದ ಐಜಿಪಿ ಎನ್. ಶಿವಪ್ರಸಾದ್,
ನಿರ್ದೇಶಕ, ಭದ್ರತೆ ಮತ್ತು ವಿಚಕ್ಷಣ ದಳ,
ಕೆಎಸ್ಸಾರ್ಟಿಸಿ ಬೆಂಗಳೂರು
*ಕೊಪ್ಪಳ ಎಸ್ಪಿ, ಅನೂಪ್ ಶೆಟ್ಟಿ, ಗುಪ್ತಚರ ದಳ,
ಬೆಂಗಳೂರು
*ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ
ರೇಣುಕಾ ಸುಕುಮಾರ್, ಎಸ್ಪಿ, ಕೊಪ್ಪಳ
*ಬೆಂಗಳೂರು ಈಶಾನ್ಯ ವಲಯದ ಡಿಸಿಪಿ ಎಸ್.
ಗಿರೀಶ್ ಎಸ್ಪಿ, ಮಂಡ್ಯ
*ಬೆಂಗಳೂರು ಎಸಿಬಿ ಎಸ್ಪಿ ಕಲಾ ಕೃಷ್ಣಮೂರ್ತಿ,
ಡಿಸಿಪಿ, ಈಶಾನ್ಯ, ಬೆಂಗಳೂರು
*ಬೆಂಗಳೂರು ಗ್ರಾಮೀಣ ಎಸ್ಪಿ ಅಮಿತ್ ಸಿಂಗ್,
ಎಸ್ಪಿ ಮೈಸೂರು
*ಬೆಂಗಳೂರು ಪಶ್ಚಿಮ ಡಿಸಿಪಿ ಎಂ.ಎನ್.
ಅನುಚೇತ್, ಎಸ್ಪಿ, ಸಿಐಡಿ, ಬೆಂಗಳೂರು
*ಮೈಸೂರು ಎಸ್ಪಿ ರವಿ ಚನ್ನಣ್ಣವರ, ಡಿಸಿಪಿ,
ಪಶ್ಚಿಮ ವಿಭಾಗ, ಬೆಂಗಳೂರು
*ವಿಜಯಪುರ ಎಸ್ಪಿ ಕುಲದೀಪ್ ಜೈನ್,
ಕಮಾಂಡಂಟ್, ಕೆಎಸ್ಸಾರ್ಪಿ, ಬೆಂಗಳೂರು
*ಕೆಎಸ್ಸಾರ್ಪಿ ೯ನೇ ಬಟಾಲಿಯನ್ ಕಮಾಂಡಂಟ್
ಅಮೃತ್ ನಿಖಂ, ಎಸ್ಪಿ, ವಿಜಯಪುರ
*ದಾವಣಗೆರೆ ಎಸ್ಪಿ ಭೀಮಾಶಂಕರ ಗುಳೇದ,
ಎಸ್ಪಿ, ಬೆಂಗಳೂರು ಗ್ರಾಮೀಣ
*ಮಂಡ್ಯ ಎಸ್ಪಿ ಜಿ.ರಾಧಿಕಾ, ಎಸ್ಪಿ, ಎಸಿಬಿ,
ಬೆಂಗಳೂರು.