ಕಾವೇರಿ ಗಲಭೆಗೆ ಬೆಂಗಳೂರು ಉದ್ವಿಗ್ನ : 16 ಕಡೆ ಕರ್ಫ್ಯೂ ಜಾರಿ
ಬೆಂಗಳೂರು(ಸೆ.13): ನಗರದಲ್ಲಿ ಕಾವೇರಿ ಗಲಭೆ ಉದ್ವಿಗ್ನಗೊಂಡಿರುವ ಹಿನ್ನೆಲೆಯಲ್ಲಿ ರಾಜಗೋಪಾಲನಗರ, ಸುಂಕದಕಟ್ಟೆ, ಬ್ಯಾಟರಾಯನಪುರ, ವಿಜಯನಗರ, ಲಗ್ಗೆರೆ, ಪೀಣ್ಯ, ಆರ್ಎಂಸಿ ಯಾರ್ಡ್, ಕೆಂಗೇರಿ,ರಾಜಾಜಿನಗರ, ಮೈಸೂರು ರೋಡ್, ಮಾಗಡಿ ರೋಡ್ ಸೇರಿದಂತೆ 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಜಾರಿಗೊಳಿಸಲಾಗಿದೆ.
ಹೆಗ್ಗನಹಳ್ಳಿಯ ಮುಖ್ಯರಸ್ತೆಯಲ್ಲಿ ಪೊಲೀಸ್ ಫೈರಿಂಗ್ನಲ್ಲಿ ಗಾಯಗೊಂಡಿದ್ದ ಉಮೇಶ್(25) ಸಾವನಪ್ಪಿದ್ದ ಹಿನ್ನೆಲೆಯಲ್ಲಿ ನಗರದ ಹಲವು ಕಡೆ ಪೊಲೀಸ್ ಬಿಗಿಭದ್ರತೆ ಜಾರಿಗೊಳಿಸಲಾಗಿದೆ. ಮೃತಪಟ್ಟ ಉಮೇಶ್ ತುಮಕೂರು ಮೂಲದವನಾಗಿದ್ದು, ಒಂದೂವರೆ ವರ್ಷದ ಹೆಣ್ಣುಮಗುವಿದೆ.