ರಾಮನ ಕಥೆ ಕೇಳಲು ಕುಳಿತಿದ್ದ 14 ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ
ಬಿರುಗಾಳಿ ಸಹಿತ ಭಾರೀ ಮಳೆಯಿಂದಾಗಿ ರಾಮನ ಕಥೆ ಕೇಳಲು ಕುಳಿತಿದ್ದ 14 ಜನರು ಸಾವನ್ನಪ್ಪಿದ್ದರೆ, 50ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದಾರೆ.
ಬರ್ಮೇರ್ [ರಾಜಸ್ಥಾನ], [ಜೂ.23]: ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಪೆಂಡಾಲ್(ಟೆಂಟ್) ಕುಸಿದು ಸುಮಾರು 14 ಜನರು ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ರಾಜಸ್ಥಾನದ ಬರ್ಮೇರ್ ನಲ್ಲಿ ಘಟನೆ ನಡೆದಿದೆ.
ಜೈಪುರದಿಂದ 500 ಕಿಮೀ ದೂರವಿರುವ ಜಾಸೊಲ್ ಪ್ರದೇಶದಲ್ಲಿ ಇಂದು [ಭಾನುವಾರ] ಸಂಜೆ 4.30ರ ಸುಮಾರಿಗೆ ರಾಮ ಕಥೆಯನ್ನು ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳೀಯರೆಲ್ಲರೂ ರಾಮಕಥೆಯನ್ನು ಕೇಳಲು ಅಲ್ಲಿ ನೆರೆದಿದ್ದರು.
ಈ ವೇಳೆ ಶಾಮಿಯಾನ ಅಡಿಯಲ್ಲಿ ಕುಳಿತಿದ್ದವರ ಮೇಲೆ ಬಿದ್ದಿದ್ದರಿಂದಾಗಿ ಸಾವು, ನೋವು ಸಂಭವಿಸಿದೆ ಎಂದು ಪೊಲೀಸ್ ಹೆಚ್ಚುವರಿ ಸೂಪರಿಂಟೆಂಡೆಂಟ್ ಕೀನ್ ಸಿಂಗ್ ತಿಳಿಸಿದ್ದಾರೆ.
#UPDATE: Death toll rises to 14 in the incident where a 'pandaal' collapsed in Barmer, Rajasthan. https://t.co/Pe7wcs6dsB
— ANI (@ANI) June 23, 2019
ಮಳೆಯಿಂದಾಗಿ ಎಲೆಕ್ಟ್ರಿಕ್ ಶಾಕ್ ಉಂಟಾಗಿ ಸಾವು ಸಂಭವಿಸಿದೆ ಎಂದು ಕೆಲವರು ಹೇಳಿದ್ದಾರೆ. ಘಟನೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿದ್ದು ಘಟನೆಯಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.