ಶಾಲಾ ಬಸ್’ಗೆ ರೈಲು ಡಿಕ್ಕಿ; 13 ಮಕ್ಕಳು ದುರ್ಮರಣ
ಕುಶೀನಗರದಲ್ಲಿ ಶಾಲಾ ಬಸ್’ಗೆ ರೈಲು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಬಸ್ ಡ್ರೈವರ್ ಸೇರಿದಂತೆ 13 ಮಕ್ಕಳು ದುರ್ಮರಣ ಹೊಂದಿದ್ದಾರೆ.
ಲಕ್ನೋ (ಏ. 26): ಕುಶೀನಗರದಲ್ಲಿ ಶಾಲಾ ಬಸ್’ಗೆ ರೈಲು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಬಸ್ ಡ್ರೈವರ್ ಸೇರಿದಂತೆ 13 ಮಕ್ಕಳು ದುರ್ಮರಣ ಹೊಂದಿದ್ದಾರೆ.
ದುದಹೀ ರೈಲ್ವೆ ಕ್ರಾಸಿಂಗ್ನಲ್ಲಿ ಶಾಲಾ ಬಸ್’ಗೆ ರೈಲು ಡಿಕ್ಕಿಯಾಗಿದೆ. ಡಿವೈನ್ ಪಬ್ಲಿಕ್ ಸ್ಕೂಲ್’ಗೆ ಬಸ್’ನಲ್ಲಿ 22 ಮಕ್ಕಳು ಶಾಲೆಗೆ ತೆರಳುತ್ತಿದ್ದರು. 8 ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಗಾಯಾಳು ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಘಟನೆ ಬಗ್ಗೆ ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಹಾಗೂ ರೈಲ್ವೇ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.