2008 ರ ಬೆಂಗಳೂರು ಸರಣಿ ಬಾಂಬ್ ಸ್ಟೋಟದ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮದನಿಗೆ ಸುಪ್ರಿಂಕೋರ್ಟ್10 ದಿನಗಳ ಕಾಲ ಷರತ್ತು ಬದ್ದ ಪೆರೋಲ್ ನೀಡಿದೆ .
ಬೆಂಗಳೂರು (ಆ.20): 2008 ರ ಬೆಂಗಳೂರು ಸರಣಿ ಬಾಂಬ್ ಸ್ಟೋಟದ ಪ್ರಮುಖ ಆರೋಪಿ ಅಬ್ದುಲ್ ನಾಸಿರ್ ಮದನಿಗೆ ಸುಪ್ರಿಂಕೋರ್ಟ್10 ದಿನಗಳ ಕಾಲ ಷರತ್ತು ಬದ್ದ ಪೆರೋಲ್ ನೀಡಿದೆ .
ಕೇರಳದಲ್ಲಿ ತಮ್ಮ ಮಗನ ಮದುವೆಯಿರೋ ಕಾರಣ 10 ದಿನಗಳ ಕಾಲ ಪೆರೋಲ್ ನೀಡುವಂತೆ ಸುಪ್ರೀಂಕೋರ್ಟ್ಗೆ ಅಪರಾಧಿ ಮದನಿ ಮನವಿ ಮಾಡಿದ್ದ. ಮನವಿಯನ್ನ ಪರಿಗಣಿಸಿದ ಸುಪ್ರಿಂಕೋರ್ಟ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮದನಿಗೆ 10 ದಿನಗಳ ಕಾಲ ಪೆರೋಲ್ ನೀಡಿದೆ . ಇಂದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಆರೋಪಿ ಮದನಿ ಪೊಲೀಸ್ ಭದ್ರತೆಯೊಂದಿಗೆ ಮಗನ ಮದುವೆ ಮಾಡೋದಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇರಳಕ್ಕೆ ತೆರಳಿದ್ದಾರೆ.
