ಕೆಂಗೇರಿಯ ನಿವಾಸಿಗಳಾದ ಶೋಭಾ ಮತ್ತು ಸತೀಶ್ ದಂಪತಿಯ ಮಗುವಿನ ಮೇಲೆ ಹಲ್ಲೆ

ಬೆಂಗಳೂರು(ಸೆ.11): ಸಾಲದ ದುಡ್ಡು ಕೊಟ್ಟಿಲ್ಲವೆಂದು ಒಂದು ತಿಂಗಳ ಮಗುವಿನ ಮೇಲೆ ಮಹಿಳೆಯೊಬ್ಬಳು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಂಗೇರಿಯ ನಿವಾಸಿಗಳಾದ ಶೋಭಾ ಮತ್ತು ಸತೀಶ್ ದಂಪತಿ ತಮ್ಮ ಮನೆ ಓನರ್ ಸರಸ್ವತಿ ಎಂಬಾಕೆಯ ಮಧ್ಯೆ ಹಣಕಾಸಿನ ವಿಚಾರಕ್ಕೆ ನಿನ್ನೆ ಜಗಳ ನಡೆದಿದೆ. ಈ ವೇಳೆ, ಮೊದಲಿಗೆ ಶೋಭಾ ಮೇಲೆ ಹಲ್ಲೆ ನಡೆಸಿದ ಸರಸ್ವತಿ, ಮಗುವನ್ನೂ ಹೊಡೆದಿದ್ದಾಳೆ. ಇದ್ರಿಂದ, ಮಗುವಿನ ಕಿವಿಯ ಬಳಿ ರಕ್ತ ಹೆಪ್ಪುಗಟ್ಟಿದಂತಾಗಿದೆ. ಹೀಗಾಗಿ, ಪೋಷಕರು ಸರಸ್ವತಿ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.