Asianet Suvarna News Asianet Suvarna News

ಸಚಿವರಿಗೂ ನೋ, ಅಧಿಕಾರಿಗಳಿಗೂ ನೋ: ಮೋದಿ ಭದ್ರತೆಗೆ ಹೊಸ ನಿಯಮಾವಳಿ!

ಪ್ರಧಾನಿಗೆ ಭದ್ರತೆ ಹೆಚ್ಚಿಸಿದ ಕೇಂಧ್ರ ಗೃಹ ಇಲಾಖೆ

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತೆಗೆ ಅಸ್ತು

ಸಚಿವರು, ಅಧಿಕಾರಿಗಳೂ ಮೋದಿ ಬಳಿ ಹೋಗುವಂತಿಲ್ಲ

ಹೊಸ ನಿಯಮಾವಳಿಯಲ್ಲಿ ಇರುವ ಅಂಶಗಳೇನು?

"All-Time High" Threat To PM, Agencies Advise Against Road Shows: Sources

ನವದೆಹಲಿ(ಜೂ.26): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಇಲಾಖೆ ಪ್ರಧಾನಿ ಅವರ ಭದ್ರತೆಗೆ ಹೊಸ ನೀತಿ ರೂಪಿಸಿದೆ. ಈ ಹೊಸ ನೀತಿ ನಿಯಮಾವಳಿಗಳ ಕುರಿತು ಎಲ್ಲಾ ರಾಜ್ಯ ಸರ್ಕಾರಗಳಿಗೂ ಸುತ್ತೋಲೆ ಕೂಡ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಇಲಾಖೆ ಹೊಸ ಭದ್ರತಾ ನಿಯಮಾವಳಿ ಪ್ರಕಾರ ಇನ್ನು ಮುಂದೆ ಯಾರೂ ಕೂಡ ಪ್ರಧಾನಿ ಸಮೀಪ ಬರುವಂತಿಲ್ಲ. ಈ ನಿಯಮದ ಅನ್ವಯ ಸಚಿವರು, ಅಧಿಕಾರಿಗಳು ಕೂಡ ಪರವಾನಿಗೆ ಇಲ್ಲದೇ ಅವರ ಬಳಿ ಹೋಗುವಂತಿಲ್ಲ. ಪ್ರಧಾನಿ ಅವರ ಭದ್ರತಾ ಸಿಬ್ಬಂದಿ ಪರವಾನಿಗೆ ಪಡೆದ ಮೇಲೆಯೇ ಸಚಿವರು ಮತ್ತು ಅಧಿಕಾರಿಗಳು ಅವರ ಬಳಿ ತೆರಳಬಹುದು ಎಂದು ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಎಲ್ಲಾ ರಾಜ್ಯ ಸರ್ಕಾರಗಳ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಇಲಾಖೆ, ಪ್ರಧಾನಿ ಅವರಿಗೆ ಅನಾಮಿಕ ವ್ಯಕ್ತಿಗಳು ಅಥವಾ ಸಂಘಟನೆಗಳಿಂದ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಈ ಹೊಸ ನಿಯಮಾವಳಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚನೆ ನೀಡಿದೆ. 2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭಯೋತ್ಪಾದಕ ಸಂಘಟನೆಗಳು ಮೋದಿ ಅವರನ್ನು ಟಾರ್ಗೆಟ್ ಮಾಡಬಹುದು ಎಂದು ರಾಷ್ಟ್ರೀಯ ಭದ್ರತಾ ಮಂಡಳಿ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಕೇಂದ್ರ ಗೃಹ ಇಲಾಖೆ ಈ ಆದೇಶ ಹೊರಡಿಸಿದೆ.

ನಕ್ಸಲರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈದ ಮಾದರಿಯಲ್ಲೇ ಹತ್ಯೆಗೈಯ್ಯುವ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾದ ಬಳಿಕ, ಅವರ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಅವರ ಭದ್ರತೆಗೆ ನಿಯೋಜನೆಗೊಂಡಿರುವ ಎಸ್‌ಪಿಜಿ ಪರವಾನಿಗೆ ಇಲ್ಲದೇ ಯಾರೂ ಅವರ ಬಳಿ ಹೋಗದಂತೆ ನೋಡಿಕೊಳ್ಳಲು ಆದೇಶ ನೀಡಲಾಗಿದೆ.

Follow Us:
Download App:
  • android
  • ios