ಅಂಬಾರಿ ಸಾಗುವ ಮೈಸೂರಿನ ರಸ್ತೆ ಸಂಪೂರ್ಣ ಬಂದ್
ವಿಶ್ಚವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಅಂಬಾರಿ ಸಾಗುವ ಮಾರ್ಗ ಸಂಪೂರ್ಣ ಬಂದ್ ಮಾಡಲಾಗಿದೆ.
ಮೈಸೂರು [ಅ.08]: ಮೈಸೂರಲ್ಲಿ ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರ್ಜುನನಿಗೆ ಅಂಬಾರಿ ಕಟ್ಟುವ ಕಾರ್ಯ ನಡೆಯುತ್ತಿದೆ.
ಅರ್ಜುನ ಅಂಬಾರಿ ಹೊತ್ತು ಸಾಗುವ ರಸ್ತೆಗಳು ಸಂಪೂರ್ಣ ಬಂದ್ ಮಾಡಲಾಗಿದೆ. ಮೈಸೂರಿನ ಸಯ್ಯಾಜಿ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಂಬಾರಿಯು ಅರಮನೆಯಿಂದ ಸಯ್ಯಾಜಿ ರಸ್ತೆ ಮೂಲಕ ಬನ್ನಿ ಮಂಟಪವನ್ನು ತಲುಪಲಿದೆ. ಇಲ್ಲಿ ಸಾಗುವ ಅಂಬಾರಿ ಮೆರವಣಿಗೆ ಕಣ್ತುಂಬಿಕೊಳ್ಳಲು ರಸ್ತೆ ಇಕ್ಕೆಲಗಳಲ್ಲಿ ಜನ ಸಾಗರ ಸೇರಿದೆ.
ರಸ್ತೆ ಎರಡು ಬದಿಯ ಇಕ್ಕೆಲದಲ್ಲಿ ಬ್ಯಾರಿಕೇಡ್ ಹಾಕಿದ್ದು, ಪೊಲೀಸ್ ಸಿಬ್ಬಂದಿ ಸರ್ಪಗಾವಲು ಹಾಕಲಾಗಿದೆ.