ತಮ್ಮನ ನಿಧನದ ಸುದ್ದಿ ಕೇಳಿ ಅಣ್ಣನೂ ಮೃತಪಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಬೆಟ್ಟದಪುರ [ನ.07]: ಅಣ್ಣ ಮತ್ತು ತಮ್ಮ ಒಂದೇ ದಿನ ಮೃತಪಟ್ಟಿರುವ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದಲ್ಲಿ ಬುಧವಾರ ನಡೆದಿದೆ.
Add Asianetnews Kannada as a Preferred Source

ಗ್ರಾಮದ ರಾಜಶೇಖರ ಶೆಟ್ಟಿ (70) ಮತ್ತು ಚಿಕ್ಕವೀರ ಶೆಟ್ಟಿ (62)ಒಂದೇ ದಿನ ಮೃತಪಟ್ಟ ಸಹೋದರರು. ತಮ್ಮ ಚಿಕ್ಕವೀರ ಶೆಟ್ಟಿ ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದು, ಚಿಕಿತ್ಸೆ ಫಲಕಾರಿ ಯಾಗದೇ ಬುಧವಾರ ಮೃತ ಪಟ್ಟರು.
ಈ ಹಿಂದೆಯೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ಅಣ್ಣ ರಾಜಶೇಖರ ಶೆಟ್ಟಿ ಅವರು ಸಹೋದರನ ನಿಧನದ ಸುದ್ದಿ ಕೇಳಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಹಿಂದೆಯೂ ಈ ರೀತಿಯ ಅನೇಕ ಪ್ರಕರಣಗಳು ವರದಿಯಾಗಿವೆ, ಪತಿ - ಪತ್ನಿ, ತಾಯಿ ಮಗ ಒಂದೇ ದಿನ ಮೃತಪಟ್ಟ ಘಟನೆಗಳು ನಡೆದಿದ್ದು ಇದೀಗ ಸಹೋದರರಿಬ್ಬರು ಒಂದೆ ದಿನ ಇಹಲೋಕ ತ್ಯಜಿಸಿದ್ದಾರೆ.
