ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಆಡಿಯೋ ವಿಚಾರವಾಗಿ ಡಿ. ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಹಾಗೆಲ್ಲ ವಿಚಯ ಮುಚ್ಚುಮರೆ ಮಾಡಲ್ಲ. ನೇರವಾಗಿ ಮಾತನಾಡುತ್ತಾರೆ ಎಂದು ಮೈಸೂರಿನಲ್ಲಿ ಡಿಕೆಶಿ ಹೇಳಿದ್ದಾರೆ.

ಮೈಸೂರು(ನ.08): ಸಿಎಂ ಬಿ. ಎಸ್. ಯಡಿಯೂರಪ್ಪ ಅವರ ಆಡಿಯೋ ವಿಚಾರವಾಗಿ ಡಿ. ಕೆ. ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ಯಡಿಯೂರಪ್ಪ ಹಾಗೆಲ್ಲ ವಿಚಯ ಮುಚ್ಚುಮರೆ ಮಾಡಲ್ಲ. ನೇರವಾಗಿ ಮಾತನಾಡುತ್ತಾರೆ ಎಂದು ಮೈಸೂರಿನಲ್ಲಿ ಡಿಕೆಶಿ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಮೈಸೂರಿಗೆ ಆಗಮಿಸಿದ ಡಿ. ಕೆ. ಶಿವಕುಮಾರ್ ಅವರು ಸಿಎಂ ಆಡಿಯೋ ಪ್ರಕರಣ ಬಗ್ಗೆ ಮಾತನಾಡಿದ್ದು, ಯಡಿಯೂರಪ್ಪ ನೇರನುಡಿಯ ಮನುಷ್ಯ. ಆಡಿಯೋದಲ್ಲಿರುವ ಧ್ವನಿ ತನ್ನದೇ ಎಂದು ಅವರು ಹೇಳಿದ್ದಾರೆ. ಅವರು ಹಾಗೇಲ್ಲ ಯಾವುದೇ ವಿಚಾರ ಮಚ್ಚುಮರೆ ಮಾಡೋದಿಲ್ಲ. ಧ್ವನಿ ಅವರದ್ದೇ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ರೆ ಕೆಲ ಸಂದರ್ಭದಲ್ಲಿ ನೇರನುಡಿಯನ್ನ ವಾಪಸ್ ಪಡೆಯುತ್ತಿದ್ದಾರೆ‌. ಯಾಕಾಗಿ ಅವರು ಮಾತುಗಳನ್ನ ವಾಪಸ್ ಪಡೆಯುತ್ತಿದ್ದಾರೋ ನನಗೆ ಗೊತ್ತಿಲ್ಲ‌. ಮುಂದೆ ಏನಾಗುತ್ತೆ ಅಂತ ನೋಡೋಣ ಎಂ

ರಾಜಕಾರಣ ಬೇರೆ ಸ್ನೇಹ ಬೇರೆ:

ಮಧ್ಯಂತರ ಚುನಾವಣೆ ಬರುವ ಬಗ್ಗೆ ನನಗೆನು ಗೊತ್ತಿಲ್ಲ. ಬಿಜೆಪಿಯ ಸಚಿವರು ಶಾಸಕರು ನನ್ನ ಜೊತೆ ಮಾತನಾಡಿದ್ದಾರೆ. ಎಲ್ಲರು ನನ್ನ ಸ್ನೇಹಿತರು. ಎಸ್.ಎಂ.ಕೃಷ್ಣ ನಮ್ಮ ಗುರುಗಳು. ಅವರು ಬೇರೆ ಪಕ್ಷದಲ್ಲಿದ್ದಾರೆ. ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದೆ. ಅದನ್ನೆಲ್ಲವನ್ನೂ ಮಾಧ್ಯಮದ ಮುಂದೆ ಹೇಳೋಕಾಗೋಲ್ಲ. ಹಾಗೇ ರಾಜಕಾರಣ ಬೇರೆ ವೈಯುಕ್ತಿಕ ಜೀವನವು ಬೇರೆ. ನಮ್ಮ ಸಿದ್ದಾಂತ ನಮ್ಮ‌ ಜೊತೆ ಇರುತ್ತದೆ ಎಂದಿದ್ದಾರೆ.

ತನಿಖೆ ಬಗ್ಗೆ ಬಾಯ್ಬಿಟ್ಟ ಡಿಕೆಶಿ, ED ವಿಚಾರಣೆ ಬಗ್ಗೆ ಹೇಳಿದ್ದೇನು..?