ಈ ರಾಶಿಯವರು ಇಂದು ನಂಬಿಕೆ ಉಳಿಸಿಕೊಳ್ಳಿ : ಉಳಿದ ರಾಶಿ ಹೇಗಿದೆ..? ತಿಳಿಯಿರಿ ರಾಶಿ ಭವಿಷ್ಯದ ಮೂಲಕ

ಮೇಷ
ನಿಮ್ಮಲ್ಲಿನ ಹಣವನ್ನು ನೋಡಿಯೇ ನಿಮ್ಮ
ಹತ್ರ ಎಲ್ಲರೂ ಬರುತ್ತಿದ್ದಾರೆಂಬುದು ನಿಜಕ್ಕೂ
ಸತ್ಯವಲ್ಲ. ನಿಮಗೆ ಒಳ್ಳೆಯ ಕಾಲ ಬಂದಿದೆ.

Add Asianetnews Kannada as a Preferred SourcegooglePreferred

ವೃಷಭ
ಕಷ್ಟಗಳು ದೂರಾಗಲಿದೆ. ನಿಮ್ಮದಲ್ಲದ ಹಣ
ವನ್ನು ನೀವು ಬಯಸುವುದು ಎಷ್ಟು ಸರಿ.
ನಿಮ್ಮ ಒಳ್ಳೆಯತನವೇ ನಿಮಗೆ ಶ್ರೀರಕ್ಷೆ.

ಮಿಥುನ
ಮಹಿಳೆಯರಲ್ಲಿ ಸ್ವಲ್ಪ ದುಡುಕಿನ ಸ್ವಭಾವ
ದಿಂದ ಎಡವಟ್ಟಾಗಲಿದೆ. ಆದರೂ ಅದನ್ನು
ಈಗಲೇ ಮಾತುಕತೆಗಳಿಂದ ಇತ್ಯರ್ಥಗೊಳಿಸಿ.

ಕಟಕ
ದೊಡ್ಡವರು ನಿಮ್ಮ ಬಗ್ಗೆ ಇಟ್ಟಿರುವ ನಂಬಿಕೆ
ಯನ್ನು ಸುಳ್ಳು ಮಾಡದಂತೆ ನಡೆದುಕೊಳ್ಳಿ.
ಅದರ ಪರೀಕ್ಷೆಗೆ ಈಗ ಕಾಲ ಕೂಡಿ ಬಂದಿದೆ.

ಸಿಂಹ
ಮಕ್ಕಳು ಈಗ ಮಾತ್ರ ನಿಮ್ಮ ಜತೆಗೆ ಇರುವರು.
ಅವರು ಮುಂದೆಯೂ ಹೀಗೆ ಇರುತ್ತಾರೆಂಬ
ಕನಸುಗಳೀಗ ಬೇಡ. ವಾಸ್ತವದಲ್ಲಿ ಬದುಕಿ


ಕನ್ಯಾ
ವಯಸ್ಸಾದವರ ಕಷ್ಟವನ್ನೂ ನೀವು ಅರ್ಥ
ಮಾಡಿಕೊಳ್ಳಲೇಬೇಕು. ಅವರು ನಿಮ್ಮಲ್ಲಿ
ಹೇಳಲಾಗದೆ ಪರಿತಪಿಸುತ್ತಿದ್ದಾರೆ.

ತುಲಾ
ನಿಮ್ಮಲ್ಲಿನ ಸಾಹಿತ್ಯಾಸಕ್ತಿಗೆ ಇದು ಸಕಾಲ.
ಆದರೂ ಬರವಣಿಗೆಯಲ್ಲಿ ತೊಡಗಿ ಮನೆಯ
ತುಲಾ ಹಿರಿಯರನ್ನು ಮರೆಯದಿರಿ. ಎಲ್ಲವೂ ಬೇಕು.

ವೃಶ್ಚಿಕ
ದೂರ ಪ್ರಯಾಣದಲ್ಲಿ ಬಾಲ್ಯದ ಗೆಳತಿ ಸಿಕ್ಕುವ
ಪ್ರಮೇಯವಿದೆ. ಅವರನ್ನು ನಿರ್ಲಕ್ಷಿಸದೇ
ಗೌರವಿಸಿ. ಗೌರವವನ್ನು ಪಡೆದು ಖುಷಿಪಡಿ. 

ಧನಸ್ಸು
ಮಕ್ಕಳೊಂದಿಗೆ ಮಕ್ಕಳಾಗಿಯೇ ಇರಿ. ಅವರ
ಮನಸ್ಸನ್ನು ಅರ್ಥ ಮಾಡಿಕೊಂಡರೆ ಒಳಿತು.
ಗ್ರಹಗತಿಯ ಬಗ್ಗೆ ಹೆಚ್ಚು ಯೋಚಿಸದಿರಿ.

ಮಕರ
ನಿಮ್ಮ ಹೊಲದ ಬೆಳೆಯನ್ನು ತಿನ್ನುವ ಯೋಗ
ವಿದೆ. ಅದರ ನೆಪದಲ್ಲಿ ಊರಲ್ಲಿರುವ ವೃದ್ಧ
ರನ್ನು ನೋಡುವ ಯೋಗವು ಈಗ ಬಂದಿದೆ.

ಕುಂಭ
ಹೊಸ ಯುಗದಲ್ಲಿದ್ದೇವೆಂಬ ಹಮ್ಮನ್ನು ಪಕ್ಕಕ್ಕೆ
ಇಡಿ. ಅಲ್ಲದೇ ಹಳೆಯ ತಲಾಮಾರಿನವರನ್ನು
ಗೌರವಿಸಿ. ಅದರಿಂದ ಹುರುಪು ಹೆಚ್ಚಾಗಲಿದೆ.

ಮೀನ
ಗ್ರಹಗತಿಗಳು ನಿಮ್ಮ ಮೇಲೆ ವಕ್ರದೃಷ್ಠಿಯನ್ನು
ಬೀರಿದರೆ ಏನಾದೀತೆಂಬ ಭಯವನ್ನು ಬಿಡಿ.
ಗುರು-ಹಿರಿಯರ ಸೇವೆ ಮಾಡಿದರೆ ಸಾಕು.