Asianet Suvarna News Asianet Suvarna News

ಕೆ.ಆರ್ ಪೇಟೆಯಲ್ಲಿ ಗೆದ್ದಿದ್ದು ನಾರಾಯಣಗೌಡ : ಜಮೀರ್ ಬಾಂಬ್

ಶಾಸಕ ಜಮೀರ್ ಅಹಮದ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ . ಕೆ ಆರ್ ಪೇಟೆ ಗೆಲುವಿನ ಬಗ್ಗೆ ಮಾತನಾಡಿದ್ದಾರೆ

Zameer Ahmed Slams BJP Leaders snr
Author
Bengaluru, First Published Nov 1, 2020, 8:25 AM IST

ತುಮ​ಕೂರು (ನ.01):  ಕೆ.ಆರ್‌.ಪೇಟೆ ಮಾದರಿಯ ಚುನಾವಣೆ ಶಿರಾದಲ್ಲಿ ನಡೆಯುವುದಿಲ್ಲ. ಗಿಮಿ​ಕ್‌​ನಲ್ಲಿ ಬಿಜೆಪಿ ಕೆ.ಆರ್‌.ಪೇಟೆ​ಯಲ್ಲಿ ಗೆದ್ದಿದ್ದೆ. ಅದು ಬಿಜೆಪಿ ಗೆಲು​ವಲ್ಲ, ನಾರಾ​ಯ​ಣ​ಗೌ​ಡರ ಗೆಲುವು ಎಂದು ಕಾಂಗ್ರೆಸ್‌ ಮಾಜಿ ಸಚಿವ ಜಮೀರ್‌ ಅಹಮದ್‌ ಟೀಕಿಸಿದರು.

ಶಿರಾ​ದ ಬೇಗಮ್‌ ಮೊಹ​ಲ್ಲಾ​ದಲ್ಲಿ ಮಾತ​ನಾ​ಡಿ​ದ ಅವರು, ಕಾಲಿಟ್ಟಕಡೆ​ಯ​ಲ್ಲೆಲ್ಲಾ ಬಿಜೆಪಿ ಗೆಲ್ಲು​ವು​ದಕ್ಕೆ ವಿಜ​ಯೇಂದ್ರ ಅವರೇನು ಪಾಳೇಗಾರನಾ?. ಬಿಜೆಪಿಯಲ್ಲಿ ಯಡಿಯೂರಪ್ಪ ಅವರೇ ಮಾಸ್‌ ಲೀಡರ್‌. ವಿಜಯೇಂದ್ರ ಬಂದ ಕೂಡಲೇ ಗೆಲ್ಲುವು​ದಕ್ಕೆ ಸಾಧ್ಯ​ವಿಲ್ಲ ಎಂದರು.

ಮತ್ತೆ ಸಿಎಂ ಆಗ್ಬೇಕು! ಸಿದ್ದು ಪರ ಜಮೀರ್ ಖಾನ್‌ ಸಾಹೇಬ್ರ ಬ್ಯಾಟಿಂಗ್ ..

ವಿಜಯೇಂದ್ರಗೆ ಏನು ಶಕ್ತಿ ಇದೆ. ಯಡಿಯೂರಪ್ಪ ಅವರಿಂದ ವಿಜಯೇಂದ್ರ ಗೊತ್ತಿರುವುದು. ಯಡಿ​ಯೂ​ರಪ್ಪ ಅವರ ಪುತ್ರ ಅಲ್ಲದೇ ಹೋಗಿದ್ದರೆ ವಿಜಯೇಂದ್ರ ಯಾರಿಗೂ ಗೊತಾಗುತ್ತಿ​ರ​ಲಿಲ್ಲ ಎಂದು ಲೇವಾಡಿ ಮಾಡಿದರು.

Follow Us:
Download App:
  • android
  • ios