* ಬಾಗಲಕೋಟೆ ನಗರದ ವಲ್ಲಭಾಯ್ ವೃತ್ತದ ಬಳಿ ನಡೆದ ಘಟನೆ* ಗಣೇಶನಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಯುವಕರು* ಮುಚಖಂಡಿ ತಾಂಡಾದ ಯುವಕರಿಂದ ಸಂಭ್ರಮಾಚರಣೆ
ಬಾಗಲಕೋಟೆ(ಸೆ.10): ಕೇಕ್ ಕತ್ತರಿಸಿ ಗಣೇಶನ ಹುಟ್ಟುಹಬ್ಬವನ್ನ ಭಕ್ತರು ವಿಶಿಷ್ಟವಾಗಿ ಆಚರಿಸಿದ ಘಟನೆ ನಗರದ ವಲ್ಲಭಾಯ್ ವೃತ್ತದ ಬಳಿ ಇಂದು(ಶುಕ್ರವಾರ) ನಡೆದಿದೆ.
Add Asianetnews Kannada as a Preferred Source

ಕೇಕ್ ಕತ್ತರಿಸಿ ಹ್ಯಾಪಿ ಬರ್ತಡೇ ಟು ಯೂ ಗಣೇಶ ಅಂತ ಘೋಷಣೆ ಕೂಗಿ ಯುವಕರು ಸಂಭ್ರಮಪಟ್ಟಿದ್ದಾರೆ. ಮುಚಖಂಡಿ ತಾಂಡಾದ ಯುವಕರು ಹಿರಿಯರ ಸಮ್ಮುಖದಲ್ಲಿ ಗಣೇಶನಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಬ್ಯಾಡಗಿ: ಇತರರಿಗೆ ಮಾದರಿಯಾಗಬೇಕಾದ ಶಾಸಕರು ಹೀಗಾ ಮಾಡೋದು?
ಬಾಗಲಕೋಟೆಯಿಂದ ಮುಚಖಂಡಿ ಗ್ರಾಮಕ್ಕೆ ಗಣೇಶನ ಮೂರ್ತಿ ಕೊಂಡೊಯ್ಯುವ ಮುನ್ನ ಕೇಕ್ ಕತ್ತಿರಿಸಿ ಗಣೇಶನ ಹುಟ್ಟುಹಬ್ಬ ಮಾಡಿದ್ದಾರೆ. ಕೇಕ್ ಮೇಲೆ ಹುಟ್ಟುಹಬ್ಬದ ಶುಭಾಶಯಗಳು ಶ್ರೀ ಗಣೇಶ ಅಂತ ಬರೆಯಲಾಗಿದೆ.
