ಮೋದಿಗೆ ಆತ್ಮಹತ್ಯೆ ಬೆದರಿಕೆಯೊಡ್ಡಿದ ಯುವಕ: ಕಾರಣ?
ಕಬ್ಬಿನ ಬಾಕಿ ಬಿಲ್ ಕೊಡಿಸುವಂತೆ ಪ್ರಧಾನಿಗೆ ಮನವಿ! ಸಮಸ್ಯೆ ಇತ್ಯರ್ಥವಾಗದಿದ್ದರೆ ಆತ್ಮಹತ್ಯೆ ಬೆದರಿಕೆ! ಬೆಳಗಾವಿ ಜಿಲ್ಲೆಯ ಯುವಕನಿಂದ ಪ್ರಧಾನಿಗೆ ಟ್ವೀಟ್! ಸಾಮೂಹಿಕ ಆತ್ಮಹತ್ಯೆ ಬೆದರಿಕೆಯೊಡ್ಡಿದ ಆಕಾಶ
ಬೆಳಗಾವಿ(ಆ.14): ಕಬ್ಬಿನ ಬಾಕಿ ಬಿಲ್ ಕೊಡಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವಕನೋರ್ವ ಟ್ವೀಟ್ ಮಾಡಿದ್ದು, ಬಾಕಿ ಬಿಲ್ ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ಆಕಾಶ7353 ಟ್ವಿಟರ್ ಖಾತೆಯಿಂದ ಮೋದಿ ಅವರಿಗೆ ಟ್ವೀಟ್ ಮಾಡಲಾಗಿದ್ದು, ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಬರಬೇಕಾದ ಬಾಕಿ ಬಿಲ್ ಕೊಡಿಸುವಂತೆ ಮನವಿ ಮಾಡಲಾಗಿದೆ.
@narendramodi sir we sent 28 tonns sugarcane to malaprabha suger factory mk Hubli but that factory fail to pay our money, so I need money now to get college admission. so please warn to them
— Akash7353 (@Akash73531) August 12, 2018
ಸಕ್ಕರೆ ಕಾರ್ಖಾನೆಗೆ 28 ಟನ್ ಕಬ್ಬು ಪೂರೈಸಿದ್ದರೂ ಬಾಕಿ ಬಿಲ್ ಮಾತ್ರ ಪಾವತಿಸಿಲ್ಲ ಎಂದು ಅಳಲು ತೋಡಿಕೊಂಡಿರುವ ಯುವಕ, ಬಾಕಿ ಬಿಲ್ ಬರದ ಕಾರಣ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ ಎಂದು ತಿಳಿಸಿದ್ದಾನೆ.
ಇದು ನನ್ನ ಕೊನೆಯ ಮನವಿಯಾಗಿದ್ದು, ಬಾಕಿ ಬಿಲ್ ಕೊಡಿಸದಿದ್ದರೆ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕಾಶ ಎಚ್ಚರಿಕೆ ನೀಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಯುವಕನ ಟ್ವೀಟ್ ತೀವ್ರ ಚರ್ಚೆಗೆ ಗ್ರಾಸವಾಗಿದೆ.