Vijayanagar: ವಿಜಯನಗರದ ಕೊಟ್ಟೂರು ಪಟ್ಟಣದಲ್ಲಿ ಭೀಕರ ಕುಟುಂಬ ಕೊಲೆ ನಡೆದಿದೆ. ವಿಚಾರಣೆ ನಡೆಸಿದಾಗ ಕೊಲೆ ವಿಚಾರಕ್ಕ ಸಂಬಂಧಿಸಿದಂತೆ ಆರೋಪಿ ಬಾಯ್ಬಿಟ್ಟಿದ್ದಾರೆ. ಪೊಲೀಸ್ ರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. 

ವಿಜಯನಗರ: ಕೊಟ್ಟೂರು ಪಟ್ಟಣದಲ್ಲಿ ಜನವರಿ 27 ರಂದು ಭೀಕರ ಕುಟುಂಬ ಕೊಲೆ ನಡೆದಿದೆ. ಅರೋಪಿ ಅಕ್ಷಯ್ ಕುಮಾರ್ ತಮ್ಮ ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ ಬಳಿಕ ಸ್ಥಳೀಯರು ಭಯಭೀತರಾಗಿದ್ದಾರೆ. ವರದಿಗಳ ಪ್ರಕಾರ, ಅಕ್ಷಯ್ ಕುಟುಂಬದ ಕೆಲವು ಉದ್ಯೋಗ ಸಂಬಂಧಿತ ಕೆಲಸಕ್ಕಾಗಿ ಕೊಟ್ಟೂರು ಪಟ್ಟಣಕ್ಕೆ ಬಂದಿದ್ದರು. ಆದರೆ ಮನೆಯಲ್ಲೇ ಆಕಸ್ಮಿಕವಾಗಿ ತೀವ್ರ ಹಿಂಸೆ ಪರಿಣಾಮವಾಗಿ, ತಂದೆ, ತಾಯಿ ಮತ್ತು ಸಹೋದರಿಯನ್ನು ಕೊಲೆಮಾಡಿ ಮನೆಯಲ್ಲಿ ಹೂತಾಕಿದ್ದಾನೆ ಎನ್ನಲಾಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೋಲೀಸರ ಪರಿಶೀಲನೆ:

ಸ್ಥಳಕ್ಕೆ ಶೀಘ್ರವೇ ಕೊಟ್ಟೂರು ಠಾಣೆಯ ಪೊಲೀಸರು ಭೇಟಿ ನೀಡಿ ಅರೋಪಿಯನ್ನು ಕರೆತರಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮನೆ ಪರಿಶೀಲನೆ ನಡೆಸಿ, ಸ್ಥಳವನ್ನು ಸೀಲ್ ಮಾಡಿ ಕಾರ್ಯಚರಣೆ ನಡೆಸಲಾಗುವುದು ಎಂದು ವರದಿ ತಿಳಿಸಿದೆ.

ಅರೋಪಿ ವರ್ತನೆ ಮತ್ತು ತನಿಖೆ:

ಅಕ್ಷಯ್ ಬೆಂಗಳೂರಿಗೆ ಹೋಗಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಲು ಹೋದಾಗಲೇ ಪೊಲೀಸರಿಗೆ ಶಂಕೆ ಬಂತು. ವಿಚಾರಣೆ ವೇಳೆ, ಕೊಲೆ ಮಾಡುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳು ಅರ್ಹ ಕ್ರಮ ಕೈಗೊಂಡು, ಶವಗಳ ಪತ್ತೆ, ಮನೆ ಪರಿಶೀಲನೆ ಮತ್ತು ಆರೋಪಿಯ ಬಂಧನದ ಪ್ರಕ್ರಿಯೆಯನ್ನು ಮುಂದುವರಿಸುತ್ತಿದ್ದಾರೆ.

ಮುಂದಿನ ಕ್ರಮ:

ಕೊಟ್ಟೂರು ಮತ್ತು ಬೆಂಗಳೂರು ಪೊಲೀಸ್ ಇಲಾಖೆ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದು, ಮನೆಯಲ್ಲಿ ಪರಿಶೀಲನೆ, ಶವ ಪತ್ತೆ ಮತ್ತು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ. ಪೊಲೀಸರು ಸಾರ್ವಜನಿಕರನ್ನು ಶಾಂತಿಯಾಗಿರಲು ಮನವಿ ಮಾಡಿದ್ದಾರೆ.