ಉಡುಪಿಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಜಗತ್ತಿನ ವಿವಿಧೆಡೆ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜ.18ರಂದು ನಡೆಯಲಿರುವ ಅವರ ನಾಲ್ಕನೇ ಪರ್ಯಾಯಕ್ಕೆ ವಿದೇಶಗಳಿಂದ ಅತಿಥಿಗಳ ದಂಡೇ ಆಗಮಿಸುವ ಸಾಧ್ಯತೆಯಿದೆ.

ಉಡುಪಿ (ಜ.13): ಉಡುಪಿಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಜಗತ್ತಿನ ವಿವಿಧೆಡೆ ಪ್ರವಾಸ ಕೈಗೊಂಡಿರುವ ಹಿನ್ನೆಲೆಯಲ್ಲಿ ಜ.18ರಂದು ನಡೆಯಲಿರುವ ಅವರ ನಾಲ್ಕನೇ ಪರ್ಯಾಯಕ್ಕೆ ವಿದೇಶಗಳಿಂದ ಅತಿಥಿಗಳ ದಂಡೇ ಆಗಮಿಸುವ ಸಾಧ್ಯತೆಯಿದೆ.

Add Asianetnews Kannada as a Preferred SourcegooglePreferred

ಅಂತಾರಾಷ್ಟ್ರೀಯ ಶಾಂತಿಗಾಗಿ ಧರ್ಮಗಳು ಸಮಿತಿ Religions for Peace International ) (ಪ್ರಧಾನ ಕಾರ್ಯದರ್ಶಿ ಡಾ .ವಿಲಿಯಂ ಎಫ್ ವೆಂಡ್ಲಿ ಅಮೆರಿಕದಿಂದ ಆಗಮಿಸುತ್ತಿದ್ದಾರೆ. ಅವರು ಎಲ್ಲಾ ಖಂಡಗಳ 60 ಹಿರಿಯ ಧಾರ್ಮಿಕ ಮುಖಂಡರನ್ನು ಒಳಗೊಂಡಿರುವ ಅದರ ವಿಶ್ವ ಮಂಡಳಿಯ ಸದಸ್ಯರಾಗಿದ್ದಾರೆ. 

ಉಡುಪಿ ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಹೈಕೋರ್ಟ್ ಒಪ್ಪಿಗೆ : ಸುಗುಣೇಂದ್ರ ತೀರ್ಥರಿಂದ ಅದ್ಧೂರಿ ಪುರಪ್ರವೇಶ!

ಶಾಂತಿಗಾಗಿ ಧರ್ಮಗಳು ಶಾಂತಿಯ ಸಕಾರಾತ್ಮಕ ಅಂಶದ ಮೇಲೆ ಬಹು-ಧಾರ್ಮಿಕ ಒಮ್ಮತವನ್ನು ಮುನ್ನಡೆಸಲು ಕೆಲಸ ಮಾಡುವ ಮೂಲಕ ಶಾಂತಿಗಾಗಿ ಸಾಮಾನ್ಯ ಕ್ರಮವನ್ನು ಮುಂದುವರೆಸುವ ಮತ್ತು ಯುದ್ಧವನ್ನು ನಿಲ್ಲಿಸುವ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರಾತಿನಿಧಿಕ ಬಹು-ಧಾರ್ಮಿಕ ಒಕ್ಕೂಟವಾಗಿದೆ. ಡಾ ವಿಲಿಯಂ ಅವರು ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರನ್ನು ಹಿಂದೂ ಧರ್ಮದ ಐಕಾನ್ ಎಂದು ಕರೆಯುತ್ತಾರೆ.

ಅಂತೆಯೇ, ಜಪಾನಿನ ರಿಶೋ ಕೊಸೆ-ಕೈ ಇಂಟರ್ ನ್ಯಾಷನಲ್ ನಿಯೋಜಿತ ಅಧ್ಯಕ್ಷರಾದ ರೆವ್ ಕೊಶೋ ನಿವಾನೊ ಸಹ ಪರ್ಯಾಯಕ್ಕೆ ಆಗಮಿಸುತ್ತಿದ್ದಾರೆ. ಇವರು ಅಂತರಧರ್ಮೀಯ ಸಮ್ಮೇಳನಗಳಲ್ಲಿ ಹಾಜರಾಗುವ ಮೂಲಕ ದೇಶಿಯ ಮತ್ತು ಅಂತರರಾಷ್ಟ್ರೀಯವಾಗಿ ಅಂತರ್‌ಧರ್ಮೀಯ ಸಹಕಾರವನ್ನು ಉತ್ತೇಜಿಸುತ್ತಿದ್ದಾರೆ.

ಗೀತಾ ಜಯಂತಿ, ಕೃಷ್ಣಾಷ್ಟಮಿಗೆ ಸಾರ್ವತ್ರಿಕ ರಜೆ ನೀಡಿ: ಪುತ್ತಿಗೆ ಶ್ರೀ

 ಆಸ್ಟ್ರೇಲಿಯಾದ ವಿಕ್ಟೋರಿಯಾದ ಮಾಜಿ ಸಚಿವ ಲ್ಯೂಕ್ ಆಂಥೋನಿ ಡೊನ್ನೆಲನ್ ಅವರು ಜನವರಿ 18 ರಂದು ಪರ್ಯಾಯಕ್ಕೆ ಭೇಟಿ ನೀಡುವುದಾಗಿ ಪುತ್ತಿಗೆ ಮಠದ ಅಧಿಕಾರಿಗಳಿಗೆ ತಿಳಿಸಿದ್ದಾರೆ.