ಶಾಲೆಯಲ್ಲೇ ಬೀಡಿ ಸೇದಿದ ಶಿಕ್ಷಕರ ಅಮಾನತುವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕುಮುಖ್ಯೋಪಾಧ್ಯಯರ ಕೊಠಡಿಯಲ್ಲಿ ಬೀಡಿ
ಸಿಂದಗಿ(ಆ.4): ಶಾಲಾ ಅವಧಿಯಲ್ಲಿಯೇ ಮುಖ್ಯೋಪಾಧ್ಯಯರ ಕೊಠಡಿಯಲ್ಲಿ ಬೀಡಿ ಸೇದುತ್ತಿದ್ದರು ಎಂಬ ಆರೋಪದ ಮೇಲೆ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ನಡೆದಿದೆ.
Add Asianetnews Kannada as a Preferred Source

ತಾಲೂಕಿನ ಚಟ್ಟರಕಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾದ ಜೆ.ಎಂ.ಮೋಮಿನ್ ಹಾಗೂ ಆರ್.ಎನ್.ಇನಾಮದಾರ ಶಾಲಾ ಅವಧಿಯಲ್ಲೇ ಬೀಡಿ ಸೇದಿದ್ದರು ಎನ್ನಲಾಗಿದೆ.
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ ಅವರ ವರದಿ ಆಧರಿಸಿ ಇಬ್ಬರು ಶಿಕ್ಷಕರನ್ನು ಡಿಡಿಪಿಐ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ ಘಟನೆ ನಡೆದಿದೆ.
ಶುಕ್ರವಾರ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಿರಾದಾರ ಭೇಟಿ ನೀಡಿದಾಗ ಮುಖ್ಯೋಪಾಧ್ಯಾಯರು ಮಸೀದಿಗೆ ಪ್ರಾರ್ಥನೆ ಮಾಡಲು ತೆರಳಿದ್ದರು. ಆ ಸಮಯದಲ್ಲಿ ಈ ಇಬ್ಬರು ಶಿಕ್ಷಕರು ಶಾಲಾ ಮುಖ್ಯೋಪಾಧ್ಯಾಯರ ಕೊಠಡಿಯಲ್ಲಿ ಬೀಡಿ ಸೇದುತ್ತಿರುವುದನ್ನು ಕಂಡು ಬಿಇಒ ತಮ್ಮ ಮೇಲಾಧಿಕಾರಿಗೆ ಈ ಕುರಿತು ವರದಿ ನೀಡಿದ್ದರು.
