Asianet Suvarna News Asianet Suvarna News

ಹಗರಿಬೊಮ್ಮನಹಳ್ಳಿ: ತೆಪ್ಪ ಮಗುಚಿ ಮದು​ಮಗ ಸೇರಿ ಇಬ್ಬರ ದುರ್ಮರಣ

ತೆಪ್ಪ ಮಗುಚಿ ನೀರುಪಾಲಾದ ಇಬ್ಬರು ಯುವಕರು|ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ಹಿನ್ನೀರಿನಲ್ಲಿ ನಡೆದ ಘಟನೆ| ತೆಪ್ಪದಲ್ಲಿ ಬೈಕ್‌ ಹಾಕಿಕೊಂಡು ನದಿ ದಾಟುತ್ತಿದ್ದಾಗ ಆಯತಪ್ಪಿ ತೆಪ್ಪ ಮಗುಚಿ ಬಿದ್ದು ನಡೆದ ದುರ್ಘಟನೆ| 

Two People Died in River in Hagaribommanahalli in Ballari district
Author
Bengaluru, First Published Jun 8, 2020, 8:23 AM IST

ಹಗರಿಬೊಮ್ಮನಹಳ್ಳಿ(ಜೂ.08): ಸ್ನೇಹಿತನ ಜೊತೆ ತನ್ನ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ತೆರಳುತ್ತಿದ್ದಾಗ ತೆಪ್ಪ ಮಗುಚಿ ಇಬ್ಬರೂ ನೀರುಪಾಲಾದ ಘಟನೆ ಭಾನುವಾರ ಬಳ್ಳಾರಿಯ ಹಗರಿಬೊಮ್ಮನಹಳ್ಳಿ ತಾಲೂಕಿನ ತುಂಗಭದ್ರಾ ಹಿನ್ನೀರಿನಲ್ಲಿ ನಡೆದಿದೆ. 

ಮೃತರನ್ನ ಫಕ್ರುದ್ಧೀನ್‌(28) ಹಾಗೂ ಹೊನ್ನೂರ್‌ಸಾಬ್‌(18) ಎಂದು ಗುರುತಿಸಲಾಗಿದೆ. 

ಕಂಪ್ಲಿ: ಹೆಂಡ್ತಿ ಕೊಲೆಗೈದ ಆರೋಪ, ನೇಣಿಗೆ ಶರಣಾದ ಗಂಡ

ತಾಲೂಕಿನ ಸೀಗೇನಹಳ್ಳಿ 1ನೇ ಕಾಲೋನಿಯ ಯುವಕ ಫಕ್ರುದ್ಧೀನ್‌(28) ವಿವಾಹ ಜೂ.14ರಂದು ನಿಗ​ದಿ​ಯಾ​ಗಿ​ತ್ತು. ಈ ಹಿನ್ನೆಲೆಯಲ್ಲಿ ಆಹ್ವಾನ ಪತ್ರಿಕೆಗಳನ್ನು ಸಂಬಂಧಿಗಳಿಗೆ ಕೊಡಲು ಸ್ನೇಹಿತ ಹೊನ್ನೂರ್‌ಸಾಬ್‌(18)ನ ಜತೆಗೆ ಕರೆದುಕೊಂಡು ತೆಪ್ಪದಲ್ಲಿ ಬೈಕ್‌ ಹಾಕಿಕೊಂಡು ನದಿ ದಾಟುತ್ತಿದ್ದಾಗ ಆಯತಪ್ಪಿ ತೆಪ್ಪ ಮಗುಚಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
 

Follow Us:
Download App:
  • android
  • ios