Asianet Suvarna News Asianet Suvarna News

ಬೀದರ್: ಗಾಂಜಾ ಸಾಗಿಸುತ್ತಿದ್ದವರ ಬಂಧನ, 5 ಕ್ವಿಂಟಾಲ್ ಪೌಡರ್ ವಶ

ಲಾರಿ ಮೂಲಕ ಗಾಂಜಾ ಸಾಗಾಟ| ಇಬ್ಬರ ಬಂಧನ| ಅಬಕಾರಿ ಪೊಲೀಸರ ಯಶಸ್ವಿ ಕಾರ್ಯಾಚರಣೆ|ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 5 ಕ್ವಿಂಟಾಲ್ ಗಾಂಜಾ ಪೌಡರ್, ಲಾರಿ ಸೇರಿ‌ ಸುಮಾರು 35 ಲಕ್ಷ ಮೌಲ್ಯದ ಸಾಮಗ್ರಿಗಳು ವಶ|ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿರುವ ವನಮಾರಪಳ್ಳಿ ಚೆಕ್ ಪೋಸ್ಟ್ ಬಳಿ ದಾಳಿ|

Two People Arrested for Marijuana Trafficking in Bidar
Author
Bengaluru, First Published Dec 30, 2019, 11:04 AM IST

ಬೀದರ್(ಡಿ.30): ಲಾರಿ ಮೂಲಕ ಗಾಂಜಾ ಸಾಗಿಸುತ್ತಿದ್ದ ಇಬ್ಬರನ್ನ ಬಂಧಿಸುವಲ್ಲಿ ಬೀದರ್ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸರ್ಜೀತ್ ಸಿಂಗ್, ನಾರಾಯಣ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ. 

ಸರ್ಜೀತ್ ಸಿಂಗ್, ನಾರಾಯಣ ಸಿಂಗ್ ಲಾರಿ ಮೂಲಕ ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲೆಯ ಔರಾದ್ ತಾಲೂಕಿನ ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿರುವ ವನಮಾರಪಳ್ಳಿ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿದ ಅಬಕಾರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಂಧಿತರಿಂದ 2 ಲಕ್ಷ ರೂ. ಮೌಲ್ಯದ 5 ಕ್ವಿಂಟಾಲ್ ಗಾಂಜಾ ಪೌಡರ್, ಲಾರಿ ಸೇರಿ‌ ಸುಮಾರು 35 ಲಕ್ಷ ಮೌಲ್ಯದ ಸಾಮಗ್ರಿಗಳು ವಶಪಡಿಸಿಕಕೊಳ್ಳಲಾಗಿದೆ. ಅಬಕಾರಿ ಡಿಸಿ ವೀರಣ್ಣ ನೇತೃತ್ವದಲ್ಲಿ ಈ ಕಾರ್ಯಚರಣೆ ‌ನಡೆದಿದೆ. 
 

Follow Us:
Download App:
  • android
  • ios