Asianet Suvarna News Asianet Suvarna News

ರಾಯಚೂರು: ಅಕ್ರಮ ನಾಡ ಬಂದೂಕು ಹೊಂದಿದ್ದ ಇಬ್ಬರ ಬಂಧನ

ಅಕ್ರಮವಾಗಿ ನಾಡ ಬದೂಕು ಹೊಂದಿದ್ದ ಇಬ್ಬರ ಬಂಧನ| ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸರ ಯಶಸ್ವಿ ಕಾರ್ಯಾಚರಣೆ| ದ್ಯಾಮಣ್ಣ ಹಾಗೂ ಈರಣ್ಣ ಬಂಧಿತ ಆರೋಪಿಗಳು| ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗಬ್ಬೂರು ಪೊಲೀಸರು| ಬಂಧಿತರಿಂದ ಎರಡು ನಾಡಬಂದೂಕು ಹಾಗೂ ವಿವಿಧ ಸಾಮಗ್ರಿ ವಶ|

Two People Arrested for Have Illegal Local Gun in Devadurga in Raichur District
Author
Bengaluru, First Published Dec 30, 2019, 10:06 AM IST

ರಾಯಚೂರು(ಡಿ.30): ಅಕ್ರಮವಾಗಿ ನಾಡ ಬದೂಕು ಹೊಂದಿದ್ದ ಇಬ್ಬರನ್ನ ಜಿಲ್ಲೆಯ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಗಬ್ಬೂರು ಪೊಲೀಸರು ಯಶಸ್ವಿಯಾಗಿದ್ದಾರೆ. ದ್ಯಾಮಣ್ಣ ಹಾಗೂ ಈರಣ್ಣ ಬಂಧಿತ ಆರೋಪಿಗಳಾಗಿದ್ದಾರೆ. 

"

ದ್ಯಾಮಣ್ಣ ಹಾಗೂ ಈರಣ್ಣ ಅಕ್ರಮವಾಗಿ ನಾಡಬಂದೂಕುಗಳನ್ನು ಹೊಂದಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಗಬ್ಬೂರು ಪೊಲೀಸರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಂಧಿತರಿಂದ ಎರಡು ನಾಡಬಂದೂಕು ಹಾಗೂ ವಿವಿಧ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ದ್ಯಾಮಣ್ಣ ಹಾಗೂ ಈರಣ್ಣ ಸ್ವತಃ ಬಂದೂಕುಗಳನ್ನ ಸಿದ್ಧಪಡಿಸುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಸಧ್ಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios