ಬಸವ ಜಯಂತಿಯಂದೇ ಅಪರೂಪದ ಕರು ಜನನ| ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೆಳವಲಕೊಪ್ಪ ಗ್ರಾಮದಲ್ಲಿ ನಡೆದ ಘಟನೆ| ಹಸು ವಿಚಿತ್ರ ಕರುವಿಗೆ ಜನ್ಮ ನೀಡಿದ್ದು ಒಂದೆ ದೇಹ, ಎರಡು ಮುಖ, ಮೂರು ಕಿವಿ, ನಾಲ್ಕು ಕಣ್ಣುಗಳನ್ನು ಹೊಂದಿದೆ| ಈ ಅಪರೂಪದ ಕರು ಹುಟ್ಟಿದ ಅರ್ಧ ಗಂಟೆಯಲ್ಲೇ ಸಾವನ್ನಪ್ಪಿದೆ| 

ಬಾಗಲಕೋಟೆ(ಏ.27): ಬಸವ ಜಯಂತಿಯಂದೇ ಜಿಲ್ಲೆಯ ಬಾದಾಮಿ ತಾಲೂಕಿನ ಬೆಳವಲಕೊಪ್ಪ ಗ್ರಾಮದಲ್ಲಿ ಅಪರೂಪದ ಕರು ಜನನವಾಗುವ ಮೂಲಕ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ.

Add Asianetnews Kannada as a Preferred SourcegooglePreferred

ಬೆಳವಲಕೊಪ್ಪ ಗ್ರಾಮದ ಶರಣಪ್ಪ ಲಿಂಗರಡ್ಡಿ ಎನ್ನುವವರಿಗೆ ಸೇರಿದ ಹಸು ವಿಚಿತ್ರ ಕರುವಿಗೆ ಜನ್ಮ ನೀಡಿದ್ದು ಒಂದೆ ದೇಹ, ಎರಡು ಮುಖ, ಮೂರು ಕಿವಿ, ನಾಲ್ಕು ಕಣ್ಣುಗಳನ್ನು ಹೊಂದಿದೆ. ಈ ಅಪರೂಪದ ಕರು ಹುಟ್ಟಿದ ಅರ್ಧ ಗಂಟೆಯಲ್ಲೇ ಸಾವನ್ನಪ್ಪಿದೆ.

ಕೊರೋನಾ ಸೋಂಕಿ​ತರ ಪತ್ತೆಗೆ ಬದಲಿ ​ಮಾರ್ಗ: ಇಲ್ಲಿದೆ ಮಾಸ್ಟರ್‌ ಪ್ಲಾನ್‌..!

ಬಸವ ಜಯಂತಿಯಂದೆ ಹುಟ್ಟು, ಸಾವು ಕಂಡ ಅಪರೂಪದ ಕರುವನ್ನು ಅದ್ಧೂರಿಯಾಗಿ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ಮಾಡಬೇಕು ಅಂದುಕೊಂಡಿದ್ದ ರೈತ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸರಳವಾಗಿ ತೋಟದಲ್ಲಿ ಅಂತ್ಯಕ್ರಿಯೆ ನಡೆಸಿದ್ದಾನೆ.