ತುಳುವಿಗಾಗಿ ಮತ್ತೆ ಕರಾವಳಿಯಲ್ಲಿ ಟ್ವೀಟ್‌ ಅಭಿಯಾನ| ದಿನಪೂರ್ತಿ ಸಾಮಾಜಿಕ ಜಾಲತಾಣದಲ್ಲಿ ತುಳು ಪರ ಹೋರಾಟ

ಮಂಗಳೂರು[ಸೆ.09]: ಪಂಚ ದ್ರಾವಿಡ ಭಾಷೆಗಳಲ್ಲೊಂದಾದ ತುಳುವಿಗೆ ದೆಹಲಿ ಮಟ್ಟದಲ್ಲಿ ಸ್ಥಾನಮಾನ ಒದಗಿಸುವ ನಿಟ್ಟಿನಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದ ಸೇರ್ಪಡೆಗೆ ಒತ್ತಾಯಿಸಿ ಟ್ವೀಟ್‌ ಅಭಿಯಾನ ಮತ್ತೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ತುಳು ಸಂಘಟನೆಗಳು ಭಾನುವಾರ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಟ್ವೀಟ್‌ ಅಭಿಯಾನ ನಡೆಸಿದ್ದಾರೆ.

ತುಳುನಾಡಿನ ಸಂಸದರು, ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು, ನಾಗರಿಕರು ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇದು ಹೊಸ ಅಧ್ಯಾಯವನ್ನು ಆರಂಭಿಸುವ ನಿರೀಕ್ಷೆಯನ್ನು ತುಳು ಸಂಘಟನೆಗಳು ವ್ಯಕ್ತಪಡಿಸಿವೆ. ಈ ಟ್ವೀಟರ್‌ ಅಭಿಯಾನದ ಹ್ಯಾಶ್‌ ಟ್ಯಾಗ್‌​ #TuluTo8thSchedule ಹಾಗೂ ಟ್ವಿಟರ್‌ ಐಡಿ #TuluofficialinKA_KL ಎಂಬುದಾಗಿರುತ್ತದೆ. ಸಾಮಾಜಿಕ ಜಾಲತಾಣದಲ್ಲಿ ತುಳು ಪರವಾದ ಇದೊಂದು ದೊಡ್ಡ ಹೋರಾಟವೆಂದೇ ವ್ಯಾಖ್ಯಾನಿಸಲಾಗಿದೆ.

Scroll to load tweet…
Scroll to load tweet…
Scroll to load tweet…
Scroll to load tweet…

ತುಳು ಭಾಷೆಯನ್ನು ಕರ್ನಾಟಕ ಮತ್ತು ಕೇರಳ ರಾಜ್ಯದಲ್ಲಿ ಮೊದಲು ಅಧಿಕೃತ ಭಾಷೆಯನ್ನಾಗಿ ಮಾಡಿದರೆ ಮುಂದೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಮತ್ತಷ್ಟುಬಲ ಬರುತ್ತದೆ. ಈ ನಿಟ್ಟಿನಲ್ಲಿ ತುಳು ಸಂಘಟನೆಗಳು ಮತ್ತೆ ಟ್ವೀಟರ್‌ ಅಭಿಯಾನಕ್ಕೆ ಮೊರೆ ಹೋಗಿವೆ.

Scroll to load tweet…

ಕಳೆದ ಅಭಿಯಾನದಲ್ಲಿ ಅರ್ಧ ಲಕ್ಷ ಮಂದಿ ಟ್ವೀಟ್‌

2018 ಆಗಸ್ಟ್‌ 10ರಂದು ತುಳು ಭಾಷೆ ಸಂವಿಧಾನದಲ್ಲಿ ಸೇರ್ಪಡೆ ಕುರಿತಂತೆ ಟ್ವೀಟ್‌ ಅಭಿಯಾನ ನಡೆದಿತ್ತು. ಈ ಅಭಿಯಾನದಲ್ಲಿ ಬರೋಬ್ಬರಿ 52,600 ಮಂದಿ ಪಾಲ್ಗೊಂಡಿದ್ದರು. ಸಂಸದ ನಳಿನ್‌ ಕುಮಾರ್‌ ಕಟೀಲ್‌, ಶಾಸಕರಾದ ವೇದವ್ಯಾಸ ಕಾಮತ್‌, ಡಾ. ಭರತ್‌ ಶೆಟ್ಟಿ, ರಾಜೇಶ್‌ ನಾಯ್ಕ್, ಸುನಿಲ್‌ ಕುಮಾರ್‌ ಸೇರಿದಂತೆ ಉಭಯ ಜಿಲ್ಲೆಗಳ ಶಾಸಕರು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.